ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶ್ರೀಗಂಧ ಕಳವು ಪ್ರಕರಣದ ಆರೋಪಿಗಳಿಗೆ ತಲಾ 7 ವರ್ಷ ಸೆರೆವಾಸ ಹಾಗೂ 55 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಹನೂರು ತಾಲೂಕಿನ ಕೆಕೆ ಡ್ಯಾಂ ಗ್ರಾಮದ ನಿವಾಸಿಗಳಾದ ಮಾದೇವ ಹಾಗೂ ರಂಗ ಶಿಕ್ಷೆಗೊಳಗಾದ ಅಪರಾಧಿಗಳು. ಅಪರಾಧಗಳು ಸೇರಿದಂತೆ ಕುಂಬೇಗೌಡ , ಅಬ್ಧುಲ್ ಜಾಬೀರ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿದ್ದರು.
2020 ಸೆ.16ರಂದು ಮಧ್ಯಾಹ್ನ 3 ಗಂಟೆಯಲ್ಲಿ ಲೊಕ್ಕನಹಳ್ಳಿ ಕಲ್ಲಬೇಟೆ ಶಿಬಿರದಿಂದ ಲೊಕ್ಕನಹಳ್ಳಿ ಸೂಲಾರ್ ಗೇಟ್ ರಸ್ತೆಯಲ್ಲಿ ಅಕ್ರಮವಾಗಿ 16ಕೆಜಿ ಹಸಿ ಶ್ರೀಗಂಧದ ತುಂಡುಗಳು ಹಾಗೂ ಚೆಕ್ಕೆಗಳನ್ನು ಸಾಗಣೆ ಮಾಡುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ಮಾಲುಗಳನ್ನು ಜಪ್ತಿ ಮಾಡಿದ್ದರು.
ಪ್ರಕರಣದ ಸಂಬಂಧ ಮಾದೇವ ,ರಂಗ, ಕುಂಬೇಗೌಡ ಮತ್ತು ಅಬ್ದುಲ್ ಜಬೀರ್ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಮಂಡಿಸಿದ್ದರು. ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ , ಪ್ರಕರಣದ 1 ಮತ್ತು 3ನೇ ಆರೋಪಿಗಳಾದ ಮಾದೇವ ಹಾಗೂ ರಂಗ ಆರೋಪ ಸಾಬೀತಾದ ಹಿನ್ನೆಲೆ ಕರ್ನಾಟಕ ಅರಣ್ಯ ಕಾಯ್ದೆ ಕಲಂ 86ಅಡಿ ತಲಾ 5 ವರ್ಷ ಸೆರೆವಾಸ ಮತ್ತು 50 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಉಳಿದಂತೆ ಪ್ರಕರಣದ 2ನೇ ಆರೋಪಿ ಕುಂಬೇಗೌಡ ವಿಚಾರಣೆ ಸಮಯದಲ್ಲಿ ಮೃತಪಟ್ಟರೆ , 4ನೇ ಆರೋಪಿ ಅಬ್ದುಲ್ ಜಬೀರನ್ನು ಖುಲಾಸೆಗೊಳಿಸಿದೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ವಾದ ಮಂಡಿಸಿದರೆ ,ಆರೋಪಿಗಳ ಪರ ಸಿ.ಬಿ.ಗಿರೀಶ್ ವಾದ ಮಂಡಿಸಿದ್ದರು.
9ಕೆಜಿಎಲ್-4
ಫೋಟೋ ಶೀರ್ಷಿಕೆ:
ನ್ಯಾಯಾಲಯದ ಆದೇಶ ಪ್ರತಿ ಮತ್ತು ಅಪರಾಧಿಗಳ ಫೋಟೋ ಇದೆ.