ಪುತ್ತ್ ಭಗವತಿಯ ವಾರ್ಷಿಕೋತ್ಸವ
ಬಿರುನಾಣಿ: ಮಾ.24ನೇ ರಂದು ಸಂಜೆ 7 ಗಂಟೆಗೆ ಕೊಡಿಮರ ನಿಲ್ಲಿಸುವ ಆಚರಣೆ ಮೂಲಕ ಬಿರುನಾಣಿ ಪುತ್ತ್ ಭಗವತಿ ನಮ್ಮೆ ಆರಂಭಗೊಳ್ಳಲಿದೆ.
31 ರಂದು ಪೊಮ್ಮಂಗಲ ಜರುಗಲಿದ್ದು, ರಾತ್ರಿ ಅಣ್ಣಳಮಾಡ ಕುಟುಂಬಸ್ಥರಿಂದ ಊಟದ ವ್ಯವಸ್ಥೆ ಇರುತ್ತದೆ. 25 ರಂದು ಸೋಮವಾರ ಬೆಳಗ್ಗೆ 6 ರಿಂದ 7 ಗಂಟೆವರೆಗೆ ತೂಚಂಬಲಿ, ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನಿತ್ಯದ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ನಡೆಯುತ್ತದೆ ಸಂಜೆ 6 ಗಂಟೆಯಿಂದ 7ಗಂಟೆವರೆಗೆ ತೂಚಂಬಲಿ ಪೂಜೆ, 26ರಂದು ಬೆಳಗ್ಗೆ 6ರಿಂದ 7ಗಂಟೆವರೆಗೆ ತೂಚಂಬಲಿ, 8 ರಿಂದ ಮಧ್ಯಾಹ್ನ 12ರವರೆಗೆ ದಿನನಿತ್ಯದ ಮಹಾಪೂಜೆ ತೀರ್ಥ ಪ್ರಸಾದ ವಿಸ್ತರಣೆ ನಡೆಯುತ್ತದೆ.
27ಕ್ಕೆ ಬುಧವಾರ ಬೆಳಗ್ಗೆ 6 ರಿಂದ 7 ಗಂಟೆವರೆಗೆ ತೂಚಂಬಲಿ. 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ದಿನನಿತ್ಯದ ಮಹಾಪೂಜೆ ತೀರ್ಥ ಪ್ರಸಾದ ಸಂಜೆ 6ರಿಂದ7 ಗಂಟೆವರೆಗೆ ತೂಚಂಬಲಿ ಪೂಜೆ ನಡೆಯುತ್ತದೆ. ನಂತರ ಶ್ರೀ ಚಾಮುಂಡಿ ದೇವಿಯ ಬೋಡ್ ಹಬ್ಬ ನಡೆಯುತ್ತದೆ. ಕಳಕಂಡ ಕುಟುಂಬಸ್ಥರಿಂದ ಅನ್ನದಾನ ಇರಲಿದೆ. ಮಾ. 28ರಂದು ಬೆಳಗ್ಗೆ 5 ಗಂಟೆಗೆ ದೇವರ ದರ್ಶನ ಬೆಳಗ್ಗೆ 9 ಗಂಟೆಗೆ ತೂಚಂಬಲಿ ಪೂಜೆ, 11 ಗಂಟೆಗೆ ನಾಡ್ ಬೆಳಕು ತುಲಾಭಾರ ಸೇವೆಗಳು ಮತ್ತು ದಿನನಿತ್ಯದ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ. ಸಂಜೆ 6 ಗಂಟೆಯಿಂದ 7 ಗಂಟೆವರೆಗೆ ತೂಚಂಬಲಿ ಪೂಜೆ ನಡೆಯುತ್ತದೆ.
29ರಂದು ಶುಕ್ರವಾರ ಬೆಳಗ್ಗೆ 5 ಗೆ ದೇವರ ದರ್ಶನ 9 ಗಂಟೆಗೆ ತೂಚಂಬಲಿ ಪೂಜೆ 11 ಗಂಟೆಗೆ ಹರಕೆ ಬೆಳಕು ತುಲಾಭಾರ ಸೇವೆಗಳು ಮತ್ತು ದಿನನಿತ್ಯದ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ನಡೆಯುತ್ತದೆ . 30 ರಂದು ಶನಿವಾರ ಬೆಳಗ್ಗೆ 5 ಗೆ ದೇವರ ದರ್ಶನ ಬೆಳಗ್ಗೆ 9 ರಿಂದ ತೂಚಂಬಲಿ ಪೂಜೆ, 11 ಗಂಟೆಗೆ ಹರಕೆ ಬಳಕು ತುಲಾಭಾರ ಸೇವೆಗಳು ಮತ್ತು ದಿನನಿತ್ಯದ ಮಹಾಪೂಜೆ. ಅಪರಾಹ್ನ 1 ಗಂಟೆಗೆ ತೀರ್ಥ ಪ್ರಸಾದ ವಿತರಣೆ ನಡೆಯುತ್ತದೆ.
31ರಂದು ಬೆಳಿಗ್ಗೆ 5 ದೇವರ ದರ್ಶನ ಬೆಳಗ್ಗೆ 6 ರಿಂದ 7 ಗಂಟೆವರೆಗೆ ತೂಚಂಬಲಿ ಪೂಜೆ ಬೆಳಗ್ಗೆ 8:00ಗೆ ಶ್ರೀ ಚಾಮುಂಡಿ ದೇವಿಯ ಹರಕೆ ಒಪ್ಪಿಸುವುದು, ಮ. 3 ಗಂಟೆಗೆ ಪೊಮ್ಮಂಗಲ ದೇವಸ್ಥಾನಕ್ಕೆ ಹತ್ತುವುದು. ಸಂಜೆ 5ಕ್ಕೆ ದೇವರ ದರ್ಶನ ,ರಾತ್ರಿ ಹಳ್ಳಿ ಬೇಟೆ (ಶಯಣ) ನಡೆಯುತ್ತದೆ. ದಿನಾಂಕ ಏಪ್ರಿಲ್ 1 ರಂದು ಸೋಮವಾರ ಪೂರ್ವಾಹ್ನ 11 ಗಂಟೆಗೆ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಸಾಯಂಕಾಲ 5 ಗೆ ದೇವರ ದರ್ಶನ ಮತ್ತು ಸ್ನಾನಕ್ಕೆ ತೆರಳುವುದು.
ಚೊಟ್ಟಂಗಡ ಕುಟುಂಬಸ್ಥರ ಅನ್ನದಾನ, ರಾತ್ರಿ 9ಕ್ಕೆ ದೇವರ ನೃತ್ಯ, ದರ್ಶನ,ವಸಂತ ಪೂಜೆ,ವಸಂತ ಪೂಜೆ , ರಾತ್ರಿ 7 ಯಿಂದ ಮರೆನಾಡು ಶ್ರೀ ವಿನಾಯಕ ಸೇವಾ ಸಮಿತಿಯಿಂದ ಅನ್ನದಾನ ಇರುತ್ತದೆ ಎಂದು ತಕ್ಕ ಮುಖ್ಯಸ್ಥರು ಮತ್ತು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.