ಮಹಾರಾಷ್ಟ್ರ : ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಮತ್ತೆ ಇವಿಎಂತಗಾದೆ ಶುರುವಾಗಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಇವಿಎಂಗಳ ಬಗ್ಗೆ ಹೊಸ ವ್ಯಾಖ್ಯಾನ ಮಾಡಿದ್ದು, ‘ಮತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರಲು ಒಬ್ಬ ವ್ಯಕ್ತಿ ಸಜ್ಜಾಗಿದ್ದಾರೆ. ಅವರ ‘ಇವಿಎಂ’ನಲ್ಲೇ ಅವರ ಆತ್ಮ ಅಡಗಿದೆ’ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುಟುಕಿದ್ದಾರೆ.
ಮುಂಬಯಿನಲ್ಲಿ ಭಾನುವಾರ ನಡೆದ ಭಾರತ ಜೋಡೊ ಐಕ್ಯತಾ ನ್ಯಾಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಮತ ಯಂತ್ರಗಳಿಲ್ಲದೇ ಮೋದಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಯಾವ ಚುನಾವಣೆಯನ್ನೂ ಗೆಲ್ಲುವುದಿಲ್ಲ. ಇವಿಎಂಗಳೇ ಮೋದಿ ಗೆಲುವಿನ ಗುಟ್ಟು’ ಎಂದು ವಾಗ್ದಾಳಿ ನಡೆಸಿದರು.
Leave a comment