ಪ್ರತಿನಿಧಿ ವರದಿ ಮಳವಳ್ಳಿ
ತಾಲೂಕಿನ ರಾವಣಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮಲ್ಲೇಶ್, ಉಪಾಧ್ಯಕ್ಷ ಎಂ.ಎಲ್.ಬಸವರಾಜು ಅವಿರೋಧವಾಗಿ ಆಯ್ಕೆಯಾದರು.
ಗ್ರಾಮದಲ್ಲಿನ ಸಂಘದ ಸಭಾಂಗಣದಲ್ಲಿ ಮಂಗಳವಾರ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಹಕಾರ ಇಲಾಖೆಯ ಡಿ.ಆಶಾ ಕಾರ್ಯ ಆಯ್ಕೆಯ ಘೋಷಣೆ ಮಾಡಿದರು.
ನಿರ್ದೇಶಕ ರಮೇಶ್, ಮರಿಮಾದಯ್ಯ, ಆರ್.ಸಿ.ವೆಂಕಟೇಶ್, ಎನ್.ಶೋಭಾ ಶಿವರಾಜು, ನಾಗಮ್ಮ, ಭಾರತಿ, ಸುರೇಶ, ಕ್ಯಾತನಹಳ್ಳಿ ಸೊಸೈಟಿ ಅಧ್ಯಕ್ಷ ಶಿವಲಿಂಗಯ್ಯ, ಮುಖಂಡ ನಾಗಯ್ಯ, ಶಿವರಾಜ್, ಕೆಂಪಣ್ಣ, ಮಹಾದೇವಪ್ಪ, ನಂಜುಂಡೇಗೌಡ, ಪುಟ್ಟರಾಜು, ಎಂ.ನಾಗಯ್ಯ, ಕಾರ್ಯದರ್ಶಿ ನಂಜುಂಡಸ್ವಾಮಿ, ಹಾಲು ಪರೀಕ್ಷಕ ಶಂಭಯ್ಯ, ಸಹಾಯಕರಾದ ಆರ್.ಎನ್.ನವೀನ, ನಾಗೇಂದ್ರಗೌಡ ಸೇರಿದಂತೆ ಇತರರಿದ್ದರು.
ಫೋಟೊ: ಮಳವಳ್ಳಿ ತಾಲೂಕಿನ ರಾವಣಿ ಡೇರಿ ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಮಲ್ಲೇಶ್ ಅಧ್ಯಕ್ಷ, ಉಪಾಧ್ಯಕ್ಷರಾಗ ಎಂ.ಎಲ್.ಬಸವರಾಜು ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾದ ರಮೇಶ್, ಮರಿಮಾದಯ್ಯ, ಆರ್. ಸಿ. ವೆಂಕಟೇಶ್, ಎನ್. ಶೋಭಾ , ನಾಗಮ್ಮ, ಭಾರತಿ, ಸುರೇಶ ರವರನ್ನು ಮುಖಂಡರಾದ ಶಿವಲಿಂಗಯ್ಯ, ನಾಗಯ್ಯ, ಶಿವರಾಜು, ಕೆಂಪಣ್ಣ, ,ಮಹಾದೇವಪ್ಪ, ನಂಜುಡೇಗೌಡ ಅಭಿನಂದಿಸಿದರು.