ಉಚಿತ ಸಾಮೂಹಿಕ ಸರಳ ವಿವಾಹಕ್ಕೆ ನೋಂದಾಯಿಸಲು ಮಹಾಲಿಂಗೇಗೌಡ ಕರೆ
ಪ್ರತಿನಿಧಿ ವರದಿ ಮಂಡ್ಯ
ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ ವತಿಯಿಂದ ಏಪ್ರಿಲ್ ೧೪ ರ ಭಾನುವಾರ ಬಸರಾಳಿನಲ್ಲಿ ಉಚಿತ ಸಾಮೂಹಿಕ ಸರಳ ವಿವಾಹವನ್ನು ಹಮ್ಮಿಕೊಳ್ಳಲಾಗಿದ್ದು,ಆಸಕ್ತರು ಏಪ್ರಿಲ್ ೫ ರೊಳಗೆ ನೋಂದಾಯಿಸಿಕೊಳ್ಳುವಂತೆ ಉದ್ಯಮಿ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕ ಮುದ್ಧನಘಟ್ಟ ಮಹಾಲಿಂಗೇಗೌಡ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಫೌಂಡೇಶನ್ ವತಿಯಿಂದ ಮುದ್ದನಘಟ್ಟ ಗ್ರಾಮದ ಶ್ರೀಮತಿ ತಾಯಮ್ಮ ಶ್ರೀ ರಾಮೇಗೌಡರ ಕುಟುಂಬ ವರ್ಗದವರು ನೂತನವಾಗಿ ನಿರ್ಮಿಸಿರುವ ‘ತಾರಾ ಭವನ’ ತಾಯಮ್ಮ ರಾಮೇಗೌಡ ಕಲ್ಯಾಣ ಮಂಟಪದ ಲೋಕಾರ್ಪಣೆ ಪ್ರಯುಕ್ತ ಉಚಿತ ಸಾಮೂಹಿಕ ಸರಳ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುಮಾರು ೬-೭ ಕೋಟಿ ರೂ.ವೆಚ್ಚದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದ್ದು ಇದರ ಉದ್ಘಾಟನೆ ಪ್ರಯುಕ್ತ ೧೦೧ ಯುವ ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ. ವಧುವರರಿಗೆ ತಾಳಿ, ಕಾಲುಂಗುರ, ಬಟ್ಟೆ ಹಾಗೂ ಸಂಬಂಧಿಗಳಿಗೆ ಊಟೋಪಚಾರ ಏರ್ಪಡಿಸಲಾಗುವುದು. ಆಸಕ್ತರು ಏಪ್ರಿಲ್ ೫ ರೊಳಗೆ ಮಹಾಲಿಂಗೇಗೌಡ ಮುದ್ದನಘಟ್ಟ,ಬಸರಾಳು ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಉದ್ಯಮಿಗಳು ಎಂ ಆರ್ ಗ್ರೂಪ್ಸ್ ೯೬೩೨೭೧೯೯೯೯ ಮತ್ತು ರಾಘವೇಂದ್ರ ಮುದ್ದನಘಟ್ಟ, ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ, ಮಂಡ್ಯ ಜಿಲ್ಲೆ ೯೬೩೨೩೬೬೬೬೭ ಸಂಪರ್ಕಿಸಲು ಮನವಿ ಮಾಡಿದರು.
ರಾಜಕೀಯದಿಂದ ದೂರ:
ಕಳೆದ ಚುನಾವಣೆಯಲ್ಲಿ ಸ್ವಾಭಿಮಾನಿ ಪಡೆಯಿಂದ ಗುರ್ತಿಸಿಕೊಂಡಿದ್ದ ನಾನು, ಸದ್ಯಕ್ಕೆ ರಾಜಕೀಯದಿಂದ ದೂರವಿರುವುದಾಗಿ ತಿಳಿಸಿದರು.
ಉದ್ಯಮ ಕ್ಷೇತ್ರದಲ್ಲಿ ಹಲವು ಕಾರ್ಯಗಳನ್ನು ಕೈಗೊಳ್ಳಬೇಕಾಗಿದ್ದು, ನಂತರ ಮತ್ತೆ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್, ಮಹೇಶ್, ವಿಶ್ವ ಹಾಜರಿದ್ದರು.