ಟಿ. ಶೆಟ್ಟಿಗೇರಿ: ಕೊಡವ ಕೂಟಾಳಿಯಡ ಕೂಟದ ವತಿಯಿಂದ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ನಡೆಯಿತು.
ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಕೊಡವ ಭಾಷೆಯಲ್ಲಿ ಬರೆದ ಪೆತ್ತವಡ ಆರೈಕೆ ಎಂಬ ಕೊಡವ ಜನಾಂಗದ ಸಂಪ್ರದಾಯದಂತೆ ಗರ್ಭಿಣಿ ಹಾಗೂ ಬಾಣಂತಿಯರನ್ನು ಆರೈಕೆ ಮಾಡುವ ವಿವರವುಳ್ಳ ಕೊಡವ ಪುಸ್ತಕದ ಬಿಡುಗಡೆ ಮಾಡಲಾಯಿತು.
ಸಂಘಟನೆಯು ನಡೆಸಿದ್ದ ಕೊಡಗ್ರ ಚುಪ್ಪಿ ಕೋಗಿಲೆಯ ಭಾಗ-3 ರ ಗಾಯನ ಸ್ಪರ್ಧೆ ವಿಜೇತರಿಗೆ, ಟಾಪ್ ಟೆನ್ ಸ್ಥಾನ ಪಡೆದ ಮಕ್ಕಳಿಗೆ, ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಸಿದ್ಧ ಆಟ್ ಪಾಟ್ ಪಡಿಪು ಶಿಬಿರದಲ್ಲಿ ಕತ್ತಿಯಾಟ್ ಕಲಿತ ಶಿಬಿರಾರ್ಥಿಗಳಿಗೆ ಮಾನ್ಯತೆ ಕಾಗದ ನೆನಪಿನ ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಕ್ಕಾಟಿರ ಹಿತೈಷಿ ನಾಣಯ್ಯ ಅವರಿಂದ ಭರತನಾಟ್ಯಂ ಸ್ವಾಗತ ನೃತ್ಯ, “ಕೊಡವಾಮೆಲ್ ಪೆತ್ತವಡ ಆರೈಕೆ” ವಿಷಯದ ಬಗ್ಗೆ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನಗಾರ್ತಿ ಮಾಳೇಟಿರ ಸೀತಮ್ಮ ಅವರಿಂದ ಮಾಹಿತಿ ಹಂಚಿಕೊಳ್ಳಲಾಯಿತು. ಚುಪ್ಪಿ ಕೋಗಿಲೆ ಸ್ಪರ್ಧೆಯ ಮಕ್ಕಳಿಂದ ಗಾಯನ, ತರಬೇತಿ ಪಡೆದ ಮಕ್ಕಳಿಂದ ಕತ್ತಿಯಾಟ್ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮೂಡಿ ಬಂತು.
ಸಂಘಟನೆಯ ಕಲಿಕಾ ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳಿಂದ ಕೊಡವ ಜನಾಂಗದ ವಿಶೇಷ ಪದ್ದತಿಯಾದ ಸಮ್ಮಂದ ಅಡ್ಕುವ ಪದ್ದತಿ ಅರಿವು ಮೂಡಿಸಲಾಯಿತು.
ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷ ಚಂಗುಲಂಡ ಸೂರಜ್ ಮಾತನಾಡಿ ದರು.
ಸಮ್ಮಂದ ಅಡ್ಕುವ ಪುಸ್ತಕ, ಪೆತ್ತವಡ ಆರೈಕೆ ಪುಸ್ತಕದ ಪ್ರದರ್ಶನ ಹಾಗೂ ಮಾರಾಟ ಇತ್ತು.
ದಾನಿ ಕೊಙಂಡ ಕಾಶಿ ಕಾರ್ಯಪ್ಪ, ಬಯವಂಡ ಮಹಾಬಲ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ಇದ್ದರು.
ಕೂಟದ ನಿರ್ದೇಶಕ ಕರ್ತುರ ರನ್ನು ಪೆಮ್ಮಯ್ಯ ಪ್ರಾರ್ಥಿಸಿದರು. ಸ್ಥಾಪಕ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ನಿರೂಪಿಸಿದರು. ಸಹಕಾರ್ಯದರ್ಶಿ ನೂರೆರ ಸರಿತ ಉತ್ತಯ್ಯ ಸ್ವಾಗತಿಸಿದರು. ನಿರ್ದೇಶಕಿಯರಾದ ಕೊಟ್ಟಂಗಡ ಕವಿತ ವಾಸು ಹಾಗೂ ಬೊಜ್ಜಂಗಡ ಭವ್ಯ ದಿಲನ್ ವೇದಿಕೆಯ ಗಣ್ಯರನ್ನು ಪರಿಚಯಿಸಿದರು. ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ವಂದಿಸಿದರು. ನಿರ್ದೇಶಕ ಕಾಳಮಂಡ ರಾಬಿನ್ ಅಚ್ಚಮ್ಮ, ಸದಸ್ಯ ಮಾಚಿಮಾಡ ಡಿಂಪಲ್ ವಾಸು ಇದ್ದರು.