ಮೈಸೂರು : ಎಂ.ಲಕ್ಷ್ಮಣ್ ನನ್ನು ಜೈಲಿಗೆ ಕಳಿಸ್ತೀನಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹಗೆ ಬುದ್ದಿ ಭ್ರಮಣೆಯಾಗಿದೆ. ಅವರಿಗೆ ನಿಮ್ಹಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ.ನಿಮಗೆ ಟಿಕೆಟ್ ಮಿಸ್ ಮಾಡಿದ್ದು ಯಾರು? ಯಾಕೆ ಅನ್ನೋ ಸತ್ಯ ಮೊದಲು ಹೇಳಿ. ನೀವು ನನ್ನ ಎದುರಾಳಿಯೇ ಅಲ್ಲ. ಯಾಕೆ ನನ್ನ ಬಗ್ಗೆ ಮಾತಾಡ್ತೀರಿ? ನಾನು ಒಕ್ಕಲಿಗ ಅಲ್ಲ ಅಂತ ಫ್ರೂಪ್ ಇದ್ದರೆ ಕೊಡಿ. ನಾವು ಹುಟ್ಟಿದ್ದಾಗ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ. ಹತಾಶರಾಗಿ ಪ್ರತಾಪ್ ಸಿಂಹ ಮಾತಾಡುತ್ತಿದ್ದಾರೆ.ಕೈ ಮುಗಿದು ಕೇಳ್ತೀನಿ. ಚುನಾವಣೆ ಗೆ ಮುನ್ನವೆ ನನ್ನ ಜೈಲಿಗೆ ಕಳಿಸುವ ಕೆಲಸ ಮಾಡಿ ಎಂದರು. ಅಲ್ಲದೆ ನಿಮ್ಮ ಬಗ್ಗೆ ಏನೂ ಮಾತಾಡಬಾರದು ಎಂಬ ತಡೆಯಾಜ್ಞೆ ಯಾಕೆ ತಂದ್ರಿ..? ತಡೆಯಾಜ್ಞೆ ತೆರವು ಮಾಡಿ ಬನ್ನಿ ನಂದೇನೂ ಚರಿತ್ರೆ, ನಿಮ್ಮದೇನು ಚರಿತ್ರೆ ಅಂತ ಮುಕ್ತವಾಗಿ ಚರ್ಚೆ ಮಾಡೋಣ. ಎಚ್.ಡಿ. ದೇವೇಗೌಡರನ್ನು ನಾನು ಯಾವತ್ತಾದರೂ ಬೈಯ್ದಿದ್ದರೆ ತೋರಿಸಿ. ನಾನು ಜೂಜಾಡಲ್ಲ, ಸಿಗರೇಟ್ ಸೇದಲ್ಲ, ರಾತ್ರಿ ವ್ಯವಹಾರ, ಹಗಲು ವ್ಯವಹಾರ ಮಾಡಲ್ಲ. ಮಡಿಕೇರಿಯಲ್ಲಿ ಎಸ್ಟೇಟ್ ಇಲ್ಲ. ರೆಸಾರ್ಟ್ ಮಾಡಿಲ್ಲ. ನ್ಯಾಯಾಲಯದಲ್ಲಿನ ತಡೆಯಾಜ್ಞೆ ತೆರವು ಮಾಡಿನನ್ನದ್ದು ಕೊಳಕು ಜೀವನನಾ ನಿಮ್ಮದು ಕೊಳಕು ಜೀವನನ್ನು ಎಂಬುದನ್ನು ಜನರ ಮುಂದೆ ಬಿಚ್ಚಿಡ್ತೀನಿ ಎಂದು ತಿರುಗೇಟು ಕೊಟ್ಟಿದ್ದಾರೆ.