ಪ್ರತಿನಿಧಿ ವರದಿ ಹಾಸನ
ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಆದೇಶವನ್ನು ರದ್ದು ಮಾಡುವಂತೆ ಒತ್ತಾಯಿಸಿ ಹಿಂದು ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಅಲ್ಲದೆ, ಬೆಂಗಳೂರಿಗೆ ಕಳಪೆ ಗುಣಮಟ್ಟದ ಮಾಂಸವನ್ನು ಸರಬರಾಜು ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಹಾಗೂ ದೂರುದಾರ ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ ಎಸಗಿದರು ಎನ್ನಲಾದ ಪೊಲೀಸ್ ಎಸಿಪಿ ಚಂದನ್ ಕುಮಾರ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಸಮಿತಿಯ ಮುತ್ತುರಾಜ್, ಸುಜಾತಾ ನವೀನ್, ಗೋವಿಂದರಾಜು, ಸೋಮಣ್ಣ, ಶ್ರೀ ಧರ್ಮಸ್ಥಳ ಸೇವಾ ಸಮಿತಿ ಸದಸ್ಯ ರಾಘವೇಂದ್ರಾಚಾರ್, ಉತ್ತರಮುಖಿ ಉತ್ತಿಷ್ಠ ಗಣಪತಿ ದೇಗುಲ ಅಧ್ಯಕ್ಷ ಬ್ಯಾಟಾಚಾರ್, ಶ್ರೀ ಕಾಳಿಕಾಂಬ ಕಲಾ ಸಂಘ ಗೌರವ ಅಧ್ಯಕ್ಷ ರಾಜೇಂದ್ರ ಮುಂತಾದವರು ಉಪಸ್ಥಿತರಿದ್ದರು.