ಪ್ರತಿನಿಧಿ ವರದಿ ಹಾಸನ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಕರ್ನಾಟದ ಎಲ್ಲ ನ್ಯಾಯಾಲಯದಲ್ಲಿ ಕಡ್ಡಾಯವಾಗಿ ಅಳವಡಿಸಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಸುನಿಲ್ ದತ್ತಯಾದವ್, ಎಚ್.ಪಿ.ಸಂದೇಶ್ ಅವರಿಗೆ ಡಾ.ಅಂಬೇಡ್ಕರ್ ಅಭಿಮಾನಿಗಳ ವಕೀಲರ ವೇದಿಕೆ ವತಿಯಿಂದ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಮಟ್ಟದ ಕಾನೂನು ಅರಿವು ಕಾರ್ಯಾಗಾರಕ್ಕೆಂದು ಸಕಲೇಶಪುರಕ್ಕೆ ಶುಕ್ರವಾರ ಆಗಮಿಸಿದ್ದ ವೇಳೆ ಮನವಿ ಸಲ್ಲಿಸಲಾಯಿತು.
ಅಂಬೇಡ್ಕರ್ ಅವರ ಭಾವಚಿತ್ರವು ರಾಜ್ಯದ ಎಲ್ಲ ನ್ಯಾಯಾಲಯ ಒಳಗೆ ಕಡ್ಡಾಯವಾಗಿ ಅಳವಡಿಸುವ ಮೂಲಕ ನ್ಯಾಯಾಲಯದ ಪರಿಪೂರ್ಣತೆಯನ್ನು ಕಾಪಾಡುವುದುವ ನ್ಯಾಯಾವಾದಿಗಳ ಕರ್ತವ್ಯವಾಗಿದೆ. ಅಂಬೇಡ್ಕರ್ ಅವರನ್ನು ವಿಶ್ವವೇ ಒಪ್ಪಿಕೊಂಡಿದೆ. ಸುಪ್ರೀಂ ಕೋರ್ಟ್ ಹೆಬ್ಬಾಗಿಲಿನಲ್ಲಿನಲ್ಲೂ ಸಂವಿಧಾನ ಶಿಲ್ಪಿಯ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಅದರಂತೆ ಪ್ರತಿ ನ್ಯಾಯಾಲಯದ ಒಳಗೆ ಭಾವಚಿತ್ರವನ್ನು ಅಳವಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಮನವಿ ಮಾಡಿದರು.
ಈಗಾಗಲೇ ವಿಶ್ವದೆಲ್ಲೆಡೆ ಅಂಬೇಡ್ಕರ್ ಅವರ ಭಾವಚಿತ್ರವು ಎಲ್ಲೆಡೆ ಅಳವಡಿಸಲಾಗಿದೆ. ಆದರೆ ಕರ್ನಾಟಕದ ನ್ಯಾಯಾಲಯದಲ್ಲಿ ಮಾತ್ರ ಆ ಕೆಲಸ ಆಗದಿರುವುದು ದೇಶದ ಸಂವಿಧಾನಕ್ಕೆ ಮಾಡುವ ಅವಮಾನ ಎನಿಸುತ್ತದೆ. ಕಾನೂನು ತಜ್ಞರು ಮತ್ತು ಕಾನೂನು ಮಂತ್ರಿಗಳು ಆಗಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವು ಇಲ್ಲದ ಕಾರಣ ನ್ಯಾಯಾಲಯವು ಪರಿಪೂರ್ಣತೆ ಇಲ್ಲದೇ ಕಳೆದುಕೊಂಡಂತೆ ಭಾಸವಾಗುತ್ತದೆ. ಸಂವಿಧಾನದ ಮೌಲ್ಯ ಎತ್ತಿ ಹಿಡಿಯುವ ಉದ್ದೇಶದಿಂದ ಸಂವಿಧಾನದ ಅಭಿಮಾನಿಗಳ ವಕೀಲರ ವೇದಿಕೆಯಿಂದ ಮತ್ತು ಕಾನೂನು ಪದವಿಧರರು ಆದ ನಾವುಗಳು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಕೇಳಿಕೊಂಡರು.
ವೇದಿಕೆಯ ಪದಾಧಿಕಾರಿ ಕೆ.ಪಿ.ಕಲ್ಪನಾ ಕೀರ್ತಿ, ಮಂಜುನಾಥ್, ಮಾನಸಾ, ಗಂಗಮ್ಮ ಇತರರಿದ್ದರು.