ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ ವಿಚಾರ ‘ ಕರ್ನಾಟಕ ಮತ್ತು ತಮಿಳುನಾಡು ಎ ಮತ್ತು ಬಿ ಟೀಂ ಆಗಿವೆ. ಇದರಿಂದ ಇಂಡಿಯಾ ಪಕ್ಷದ ಸೀಟುಗಳನ್ನು ಗೆಲ್ಲಲು ತಮಿಳುನಾಡಿಗೆ ಕರ್ನಾಟಕ ವನ್ನು ಅಡವಿಟ್ಟಿದ್ದಾರೆ ಎಂದು ಹೆಚ್ಡಿ ರೇವಣ್ಣ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ನಿಂದ ಆಪರೇಷನ್ ಕೈ ವಿಚಾರ ‘ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ, 1991 ರಿಂದ ರಾಜಕೀಯ ನೋಡ್ತಿದ್ದೇನೆ. ಆಪರೇಷನ್ ಕೈ ಗೆ ನಾವು ಹೆದರಲ್ಲ. ಕಾಂಗ್ರೆಸ್ ನವರು ಕೋಮುವಾದಿಗಳನ್ನು ದೂರ ಇಡಬೇಕು ಅಂತಾರೆ. ಆದ್ರೆ, ನಮ್ಮನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದಿದ್ದಾರೆ.