ಜಿಲ್ಲಾ ಯೋಜನೆಗಳ ಛೇರ್ಮನ್ ಸೋಮಶೇಖರ್ ಅಭಿಪ್ರಾಯ
ಪ್ರತಿನಿಧಿ ವರದಿ ಚಾಮರಾಜನಗರ
ರೋಟರಿ ಸಂಸ್ಥೆ ಎಂದರೆ ಮಾನವೀಯತೆಯ ಸೇವೆಯಾಗಿದೆ. ಹಾಗಾಗಿ ಒಂದಿಷ್ಠು ಸೇವೆಯನ್ನು ಸರ್ವರಿಗೂ ತಲುಪಿಸುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಜಿಲ್ಲಾ ಯೋಜನೆಗಳ ಛೇರ್ಮನ್ ಸೋಮಶೇಖರ್ ಹೇಳಿದರು.
ನಗರದ ರೋಟರಿ ಭವನದಲ್ಲಿ ನಡೆದ ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಜಂಟಿ ವಿಶೇಷ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ, ಈ ವರ್ಷ ರೋಟರಿಯು 10 ಯೋಜನೆಗಳನ್ನು ತಂದಿದೆ. ಸಂಧ್ಯಾ ಸುರಕ್ಷ ಯೋಜನೆ, ಪಾಟಿಸಿಟ್ ಹೆಲ್ತ್, ದುಶ್ಚಟ ಬಿಡಿಸುವುದು, ಗರ್ಭಕೋಶ ಕ್ಯಾನ್ಸರ್, ಕುಡಿಯುವ ನೀರು, ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದು, ಅಂಗನವಾಡಿ ಪುನಶ್ಚೇತನ ಗೊಳಿಸುವುದು, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಬಗ್ಗೆ ಅರಿವು, ರಸ್ತೆ ಸುರಕ್ಷತಾ ಬಗ್ಗೆ ಅರಿವು, ಮಾನಸಿಕ ಕಾಯಿಲೆ ಕುರಿತು ಅರಿವು, ಜೀವನ ಕೌಶಲ್ಯ ತರಬೇತಿ ಕೊಡಿಸುವುದು ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಅಧ್ಯಕ್ಷ ರಾಮಸಮುದ್ರ ಎಲ್.ನಾಗರಾಜು, ಕಾರ್ಯದರ್ಶಿ ಎಚ್.ಎಂ.ಗುರುಸ್ವಾಮಿ,ರೋಟರಿ ಸಂಸ್ಥಾಪಕ ಸದಸ್ಯ ಶ್ರೀನಿವಾಸಶೆಟ್ಟಿ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮಾಣಿಕ್ ಚಂದ್ ಸಿರ್ವಿ, ಕಾರ್ಯದರ್ಶಿ ಶಮಿತ್ ಕುಮಾರ್, ಜೆಡ್.ಎಲ್.ಸುರೇಶ್ ಸೇರಿದಂತೆ ಸಂಸ್ಥೆಯ ಸದಸ್ಯರಿದ್ದರು.
23ಸಿಎಚ್ಎನ್.5: ಚಾಮರಾಜನಗರದ ರೋಟರಿ ಭವನದಲ್ಲಿ ನಡೆದ ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಜಂಟಿ ವಿಶೇಷ ಸಭೆಯಲ್ಲಿ ಜಿಲ್ಲಾ ಯೋಜನೆಗಳ ಛೇರ್ಮನ್ ಸೋಮಶೇಖರ್ ಮಾತನಾಡಿದರು.