ಜಗತ್ತಿನಲ್ಲಿ ಒಂದು ಮಾತಿದೆ.. ಪ್ರತಿಭೆಯನ್ನ ಪೋಷಿಸಿ ಬೆಳೆಸಿದಾಗ ಅದಕ್ಕೆ ನಿಜವಾದ ಅರ್ಥ ಸಿಗುತ್ತೆ ಅಂತ.. ನಯ ವಿನಯದಿಂದ ಬದುಕಿದ್ರೆ ಜೀವನ ಸಮೃದ್ಧಿ ಅಂತ ಹಿರಿಯರು ಹೇಳಿದ್ದಾರೆ. ನಮ್ಮ ಲೈಫ್ ಸ್ಟೈಲ್ ನಮ್ಮ ಕರಿಯರ್ ನ ನಿರ್ಧರಿಸುತ್ತೆ. ಇಲ್ಲೊಬ್ಬ ಅಸಾಮಾನ್ಯ , ಅಗಾಧ ಪ್ರತಿಭೆಯುಳ್ಳ ಕ್ರಿಕೆಟರ್ ಈಗ ತನ್ನ ದುರಹಂಕಾರದಿಂದ ಎಲ್ಲವನ್ನೂ ಕಳೆದುಕೊಂಡು ದುಃಸ್ಥಿತಿಯಲ್ಲಿದ್ದಾನೆ. ಕ್ರಿಕೆಟ್ ದಿಗ್ಗಜನ ಪ್ರಾಣ ಸ್ನೇಹಿತನ ಸ್ಥಿತಿ ಈಗ ಅಯೋಮಯವಾಗಿದೆ.
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದ ಧೈತ್ಯ ಪ್ರತಿಭೆ .. ಆತನ ಜತೆಜತೆಗೆ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ವಿನೋದ್ ಕಾಂಬ್ಳಿ.. ತೆಂಡೂಲ್ಕರ್ ಅವರ ಬಾಲ್ಯ ಸ್ನೇಹಿತ.. ಆತನ ಜೀವದ ಗೆಳೆಯನಿಗೆ ಇದೆಂಥಾ ದುಸ್ಥಿತಿ..! ಅಬ್ಬಬ್ಬಾ.. ಹೇಗಿದ್ದಾರೆ ಗೊತ್ತಾ ವಿನೋದ್ ಕಾಂಬ್ಳಿ..? ಆ ಮನುಷ್ಯ ಸರಿದಾರಿಯಲ್ಲಿ ನಡೆದಿದ್ದರೆ ಇವತ್ತು ಕ್ರಿಕೆಟ್ ಜಗತ್ತಿನ ದಿಗ್ಗಜನಾಗಿರುತ್ತಿದ್ದರೇನೋ..?
ಚಿಕ್ಕ ವಯಸ್ಸಿನಿಂದಲೂ ಅವರ ಜೊತೆ ಜೊತೆಗೇ ಆಡಿದ್ದ ಸಚಿನ್ ತೆಂಡೂಲ್ಕರ್ ಇವತ್ತಿಗೆ ಕ್ರಿಕೆಟ್’ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್ ಎಂದು ಕರೆಸಿಕೊಂಡಿದ್ದಾರೆ. ಆದರೆ.. ವಿನೋದ್ ಕಾಂಬ್ಳಿ..? ತನ್ನ ಮುಂದಿದ್ದ ಚಿನ್ನದಂಥಾ ಅವಕಾಶಗಳನ್ನು ಎಡಗಾಲಿನಿಂದ ಒದ್ದವರು. ತನ್ನ ಸಾಮರ್ಥ್ಯವನ್ನ ಹಾಳು ಮಾಡಿಕೊಂಡು ಬದುಕನ್ನ ಸರ್ವನಾಶ ಮಾಡಿಕೊಂಡಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲೊಂದು ವೀಡಿಯೊ ವೈರಲ್ ಆಗಿದೆ. ಮುಂಬೈನ ಯಾವುದೋ ಒಂದು ಬೀದಿ ಬದಿಯಲ್ಲಿ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಕಂಡಿದ್ದಾರೆ ವಿನೋದ್ ಕಾಂಬ್ಳಿ. ಇನ್ನೇನು ಕುಸಿದೇ ಬಿಟ್ಟರು ಎನ್ನುವಷ್ಟರಲ್ಲಿ ಅಕ್ಕಪಕ್ಕದಲ್ಲಿದ್ದವರು ಬಂದು ಕೈ ಹಿಡಿದು ಮೇಲೆತ್ತಿದ್ದಾರೆ. ಶಾಲಾ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ವಿಶ್ವದಾಖಲೆಯ ಜೊತೆಯಾಟವಾಡಿದ್ದ ಪ್ರತಿಭಾವಂತ ವಿನೋದ್ ಕಾಂಬ್ಳಿ. ಮುಂಬೈನ ಶಿವಾಜಿ ಪಾರ್ಕ್ ಮೈದಾನದಿಂದ ಆರಂಭಗೊಂಡಿದ್ದ ಕ್ರಿಕೆಟ್ ಪ್ರಯಾಣ.. ಭಾರತ ತಂಡದಲ್ಲೂ ಇಬ್ಬರ ಜೊತೆಯಾಟ ಮುಂದುವರಿದಿತ್ತು.
Stylish left hander, ಅದ್ಭುತ cricketer. ಅಬ್ಬರಿಸಲು ನಿಂತ ಎಂದರೆ ನಿಜಕ್ಕೂ ವಿನೋದ್ ಕಾಂಬ್ಳಿ ಮದವೇರಿದ ಆನೆ. ಭಾರತ ಪರ ಆಡಿದ್ದು ಕೇವಲ 17 ಟೆಸ್ಟ್ ಪಂದ್ಯಗಳನ್ನ. ಅದರಲ್ಲಿ ಎರಡು back to back ಡಬಲ್ ಸೆಂಚುರಿ. 1993ರಲ್ಲಿ ಟೆಸ್ಟ್ debut ಮಾಡಿ 95ರಲ್ಲಿ ಕೊನೇ ಟೆಸ್ಟ್ ಪಂದ್ಯವಾಡಿದಾಗ ವಿನೋದ್ ಕಾಂಬ್ಳಿಯವರ ಬ್ಯಾಟಿಂಗ್ ಸರಸಾರಿ 54.20. ಸಾಮಾನ್ಯ ಸಾಧನೆಯಲ್ಲ ಅದು.ಭಾರತೀಯ ಕ್ರಿಕೆಟ್’ನಲ್ಲಿ ಒಬ್ಬ ದಿಗ್ಗಜನಾಗಲು ಏನೆಲ್ಲಾ ಬೇಕಿತ್ತೋ ಅಷ್ಟೂ ವಿನೋದ್ ಕಾಂಬ್ಳಿಯವರಲ್ಲಿತ್ತು, ತಲೆಯಲ್ಲಿ ಬುದ್ಧಿಯೊಂದನ್ನು ಬಿಟ್ಟು. ಕಾಂಬ್ಳಿ ಜೊತೆ ಜೊತೆಗೇ ಆಡಿದ ಸಚಿನ್, ತನ್ನ ಸುತ್ತ ಒಂದು ಲಕ್ಷ್ಮಣ ರೇಖೆ ಎಳೆದುಕೊಂಡು, ಅದನ್ನು ಯಾವತ್ತೂ ದಾಟದೇ ಇದ್ದ ಕಾರಣಕ್ಕೆ ಕ್ರಿಕೆಟ್ ದಿಗ್ಗಜನಾಗಿ ಬಿಟ್ಟರು. ಆದರೆ ಕಾಂಬ್ಳಿ ಎಲ್ಲವನ್ನು ಹಾಳು ಮಾಡಿಕೊಂಡು ಬೀದಿಗೆ ಬಂದಿದ್ದಾನೆ.
52 ವರ್ಷದ ವಿನೋದ್ ಕಾಂಬ್ಳಿ ಈ ಹಿಂದೆ ಸಾಕಷ್ಟು ಬಾರಿ ಆರೋಗ್ಯದ ಸಮಸ್ಯೆಯಿಂದ ಬಳಲಿದ್ದಿದೆ. ಆಗೆಲ್ಲಾ, ನನ್ನ ಬಾಲ್ಯಸ್ನೇಹಿತ ಸಚಿನ್ ನೆರವಿಗೆ ಬರುತ್ತಾನೆ ಎಂದು ನಿರೀಕ್ಷೆ ಮಾಡಿದ್ದೂ ಇದೆ. ಯಾರಿಗೂ ಗೊತ್ತಾಗದಂತೆ ಸ್ನೇಹಿತನಿಗೆ ಸಚಿನ್ ಸಹಾಯವನ್ನೂ ಮಾಡಿದ್ದಾರೆ. ಈಗ ಮತ್ತೊಮ್ಮೆ ನಡೆಯಲಾಗದ ಪರಿಸ್ಥಿತಿಯಲ್ಲಿ ಕಾಂಬ್ಳಿಯವರನ್ನು ನೋಡಿರುವ ಜನ, ಸ್ನೇಹಿತರ ನೆರವಿಗೆ ಸಚಿನ್ ತೆಂಡೂಲ್ಕರ್ ಧಾವಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ.
ಜೀವನದಲ್ಲಿ ಹೇಗಿರಬೇಕು ಎಂಬುದನ್ನು ಅರಿಯಲು ತುಂಬಾ ದೂರ ನೋಡಬೇಕಾಗಿರಲಿಲ್ಲ ಈ ವಿನೋದ್ ಕಾಂಬ್ಳಿ. ತನ್ನ ಜೊತೆಗೇ ಸಾಕಷ್ಟು ವರ್ಷಗಳ ಕಾಲ ಆಡಿದ್ದ ಬಾಲ್ಯದ ಗೆಳೆಯನನ್ನೇ ಆದರ್ಶವಾಗಿಟ್ಟುಕೊಂಡರೆ ಸಾಕಿತ್ತು. ಈ ಹೊತ್ತಿಗೆ ಕಾಂಬ್ಳಿ ಇನ್ನೆಲ್ಲೋ ಇರುತ್ತಿದ್ದರು. ಆದರೆ ಶಿಸ್ತಿಲ್ಲದ ಜೀವನ, ಹದ್ದು ಮೀರಿದ ವಿನೋದಾವಳಿಗಳು, ಪ್ರಶ್ನಾರ್ಹ ನಡವಳಿಕೆಗಳು, ಕೋಪ.. ಕೊನೆಗೆ ಕಾಂಬ್ಳಿಗೆ ಇವೇ ಮಾರಕವಾಗಿ ಬಿಟ್ಟವು. ಕಾಂಬ್ಳಿ ಈಗ ಸದ್ಯ ದುಶ್ಚಟಗಳಿಗೆ ದಾಸನಾಗಿ ಹಾಳಾಗಿದ್ದಾನೆ.ದೇಶದ ಪರ 17 ಟೆಸ್ಟ್ ಪಂದ್ಯಗಳು, 104 ಏಕದಿನ ಪಂದ್ಯಗಳನ್ನಾಡಿದ್ದ ವಿನೋದ್ ಕಾಂಬ್ಳಿಯವರ ಇವತ್ತಿನ ಪರಿಸ್ಥಿತಿಗೆ ಅವರ ಹೊರತಾಗಿ ಬೇರಾರೂ ಕಾರಣರಲ್ಲ. ಒಂದು ಅದ್ಭುತ ಪ್ರತಿಭೆ , ಅಮೋಘ ಸಾಮರ್ಥ್ಯ ಹೊಂದಿದ್ದ ವ್ಯಕೃ ಇವತ್ತು ತನ್ನ ಕೈಯ್ಯಾರೆ ಲೈಫ್ ಹಾಳು ಮಾಡಿಕೊಂಡ ಅಂತ ಕ್ರಿಕೆಟ್ ಪಂಡಿತರು ಕೈ ಕೈ ಹಿಸುಕಿಕೊಳ್ತಿದ್ದಾರೆ.