- ೧೩ ಜನರ ರಕ್ಷಣೆ
ಪ್ರತಿನಿಧಿ ವರದಿ ಕುಶಾಲನಗರ
ಅತಿಯಾದ ಮಳೆಯಿಂದಾಗಿ ಕುಶಾಲನಗರದ ಕೆಲವು ಬಡಾವಣೆಗಳು ಮುಳುಗಡೆಯಾಗಿದ್ದು, ಇಲ್ಲಿನ ಸಾಯಿ ಬಡಾವಣೆಯಲ್ಲಿ ಸಿಲುಕಿದ್ದ ೧೩ ಜನರನ್ನು ರಕ್ಷಿಸಲಾಯಿತು. ಅತಿಯಾದ ಮಳೆಯಿಂದಾಗಿ ಕುಶಾಲನಗರದ ಸಾಯಿ ಬಡಾವಣೆಯ ಬಹುತೇಕ ಮನೆಗಳಿಗೆ ಮಳೆನೀರು ಪ್ರವೇಶಿಸಿ ಮನೆಗಳು ಜಲಾವೃತಗೊಂಡಿವೆ. ಈ ಸಂದರ್ಭ ಮನೆಗಳಲ್ಲಿ ಸಿಲುಕಿದ್ದ ೧೩ ಜನರನ್ನು ಪೊಲೀಸ್ ಇಲಾಖೆ ಹಾಗೂ ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೇಳೆ ಡಿ.ವೈ.ಎಸ್.ಪಿ ಗಂಗಾಧರಪ್ಪ, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಹಳು ಇದ್ದರು.