ಸಾಲಿಗ್ರಾಮ ಸಮೀಪದ ಹೊಸ ಅಗ್ರಹಾರ ಗ್ರಾಮದಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜಿ.ಕೆ.ತೋಟಪ್ಪನಾಯಕ ಅವರ ನೇತೃತ್ವದಲ್ಲಿ ಮನೆಮನೆಗೆ ತೆರಳಿ ಮತಯಾಚಿಸಲಾಯಿತು. ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಕಲ್ಲಹಳ್ಳಿ ಮಹದೇವ್, ಪುರಸಭಾ ಮಾಜಿ ಅಧ್ಯಕ್ಷೆ ಪಾರ್ವತಿನಾಗರಾಜ್, ಹಂಪಾಪುರ ದೇವರಾಜ್, ಡೇರಿ ಸೋಮ, ಪಾಪನಾಯಕ, ಮಲ್ಲಿಕಾರ್ಜುನ, ಪುಟ್ಟಸ್ವಾಮಿ, ಮಂಜಣ್ಣ, ಬೆಟ್ಟೇಗೌಡ ಇತರರು ಇದ್ದರು.