ಪ್ರತಿನಿಧಿ ವರದಿ ಹೊಳೆನರಸೀಪುರ
ರಾಷ್ಟ್ರಾದ್ಯಂತ ಶಂಕರ ತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಶಂಕರ ತತ್ವ ಪ್ರಸಾರವನ್ನು ಮಾಡುತ್ತಿರುವ ಶ್ರೀ ಶಂಕರ ಭಾರತಿ ಸ್ವಾಮಿಗಳನ್ನು ಹೃತ್ಪೂರ್ವಕವಾಗಿ ನಮಿಸಬೇಕು ಎಂದು ಹಿರಿಯ ನಿವೃತ್ತಕ ಶಿಕ್ಷಕಿ ರಮಾಮಣಿ ತಿಳಿಸಿದರು.
ಪಟ್ಟಣದ ಕೋಟೆಯ ಶಾರದಾಂಬ ಶಂಕರಾಚಾರ್ಯರ ಸನ್ನಿಧಿಯಲ್ಲಿ ಏರ್ಪಡಿಸಿದ್ದ ಶ್ರೀ ಶಾರದ ಶಂಕರ ಭಜನಾ ಮಂಡಳಿಯ ಪ್ರಥಮ ವಾರ್ಷಿಕ ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ತಾಲೂಕು ಶಾಂಕರ ತತ್ವ ಪ್ರಸಾರದ ಸಂಚಾಲಕ ನಾ ಪಟ್ಟಾಭಿ ಮಾತನಾಡಿ, ಎಲ್ಲರೂ ಸೇರಿ ಭಗವಂತನ ನಾಮಸ್ಮರಣೆ ಹಾಗೂ ಭಗವಂತನ ಸೇವೆಯಲ್ಲಿ, ಅದರಲ್ಲೂ ವಿಶೇಷವಾಗಿ ಶಂಕರಾಚಾರ್ಯರ ತತ್ವಗಳನ್ನು, ಕೃತಿಗಳು, ಸಾಹಿತ್ಯ ಅವುಗಳನ್ನು ಪಾರಾಯಣ ಮಾಡುತ್ತ ಈ ನಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳ್ಳೋಣ ಎಂದರು.
ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೂ ಸಹ ಭಜನೆ ಹಾಡುಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಈಗಾಗಲೇ ಶಾಲೆಗಳಿಗೆ ಭೇಟಿ ನೀಡಿ, ಆಸಕ್ತ ವಿದ್ಯಾರ್ಥಿಗಳ ಪಟ್ಟಿ ಮಾಡಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಶಂಕರ ಭಜನಾ ಮಂಡಳಿಯವರು ಅನೇಕ ಕಾರ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ಆಯೋಜಿಸಿದ್ದು, ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಅಧ್ಯಕ್ಷತೆಯನ್ನು ಕಾರ್ಯದರ್ಶಿಗಳಾದ ಶೈಲಜಾ ಜಗದೀಶ್ ವಹಿಸಿದ್ದರು. ಜಿಲ್ಲಾ ಸಂಚಾಲಕರಾದ ಕೆ.ಎಸ್.ಎನ್ ಮೂರ್ತಿ, ತಾಲೂಕು ಸಂಚಾಲಕರಾದ ನಾ.ಪಟ್ಟಾಭಿ, ಜಯರಾಮ್, ಇಂದಿರಾ ಬಾ.ರಾ.ಸು, ಮಂಜುಳಾ ರವೀಶ್, ವಿಶ್ವನಾಥ್, ಹಿರಿಯ ಸಾಹಿತಿ ನಾಗೇಶ್ ಕೌಂಡಿನ್ಯ , ಬಾ.ರಾ. ಸುಬ್ಬರಾಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.