ರಾಮನಗರ : ಸಮಾಜದಲ್ಲಿರುವ ಲಕ್ಷಾಂತರ ಬಡ, ಅನಾಥ ಮಕ್ಕಳಿಗೆ ಅನ್ನ, ಜ್ಞಾನ ದಾಸೋಹ, ಸಂಸ್ಕಾರ, ಮಾನವೀಯೆತೆಯನ್ನು ನೀಡಿ, ಅವರ ಬದುಕನ್ನು ಕಟ್ಟಿಕೊಟ್ಟ ಮಹಾನ ಶಿಲ್ಪಿ ಸಿದ್ಧಗಂಗಾ ಮಠದ ಶ್ರೀಗಳಾಗಿದ್ದ ಡಾ. ಶಿವಕುಮಾರ ಮಹಾಸ್ವಾಮೀಜಿ ಎಂದು ವೀರಶೈವ ಯುವಕ ಸಂಘದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ ತಿಳಿಸಿದರು.
ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿ ವೀರಶೈವ ಯುವಕ ಸಂಘ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಂಘಟನೆಗಳ ಸಂಯಕ್ತಾಶ್ರಯದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿ ಅವರ 117ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪರಹಿತ, ಸಮಾಜ ಸೇವೆಯಲ್ಲಿಯೇ ಶಿವನನ್ನು ಕಂಡು ದೈವತ್ವಕ್ಕೇರಿದ ಮಹಾನ ಚೇತನ ಅವರಾಗಿದ್ದು, ಅವರ ಸೇವೆ ಸಮಾಜಕ್ಕೆ ಸದಾ ಮಾದರಿಯಾಗಿದೆ ಎಂದರು.
ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಬದುಕಿ ತೋರಿಸಿದವರು. ದಾಸೋಹ,ಕಾಯಕ ಸಂಸ್ಕøತಿ,ಸಮಾನತೆ, ಸಾಮರಸ್ಯ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣ ಪೂಜ್ಯರದಾಗಿತ್ತು. ಸಮಾಜಕ್ಕಾಗಿ ನಿರಂತರವಾಗಿ ದಣಿವರಿಯದೆ ಸಾರ್ಥಕ ಸೇವೆಯನ್ನು ಸಲ್ಲಿಸಿ ಲಕ್ಷಾಂತರ ಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ ಎಂದರು.
ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ಕೆ.ಎಸ್. ಶಂಕರಯ್ಯ, ರಾಜಶೇಖರ್, ಭದ್ರಯ್ಯ, ಪೋಲೀಸ್ ಶಂಕರಪ್ಪ, ವಿಭೂತಿಕೆರೆ ಮಹೇಶ್, ರೇವಣ್ಣ, ಸಂಸ್ಕೃತ ವಿದ್ವಾನ್ ಚಂದ್ರ ಶೇಖರಯ್ಯ, ನಗರಸಭಾ ಸದಸ್ಯ ಮಂಜುನಾಥ್, ಜಗದೀಶ್, ಶಿವಕುಮಾರಸ್ವಾಮಿ, ಹೊನ್ನಶೆಟ್ಟಿರಾಜಣ್ಣ, ಚಿಕ್ಕೇನಹಳ್ಳಿ ಸಿ. ನಾಗರಾಜು, ವಿಭೂತಿಕೆರೆ ಶಿವಲಿಂಗಯ್ಯ, ರುದ್ರದೇವರು, ಸುಗ್ಗನಹಳ್ಳಿ ಮಹದೇವ್, ಪಿ. ಶಿವಾನಂದ, ಬೆಂಕಿ ಮಹದೇವ್, ಗುರುಲಿಂಗಯ್ಯ, ರಾ.ಶಿ. ಬಸವರಾಜು, ವಿಜಯಕುಮಾರ್, ರಾಜಶೇಖರ್, ವೆಂಕಟೇಶ್, ಗೂಳಿಕುಮಾರ್, ಕಿಶನ್ಗೌಡ, ಶಿವಶಂಕರಯ್ಯ, ಬಸವರಾಜು, ಅರ್ಚಕ ಬಸವರಾಜು, ಶಂಕರ್, ಬೇಕರಿ ಶಿವಕುಮಾರ್, ಪೈಂಟ್ ರಾಜಣ್ಣ, ಯತೀಶ್, ರೇಣುಕಾಪ್ರಸಾದ್, ರವಿ ಇತರರು ಇದ್ದರು.