ಪ್ರತಿನಿಧಿ ವರದಿ ಹುಲ್ಲಹಳ್ಳಿ
ಸಂಗಮ ಕ್ಷೇತ್ರದ ಕಾರ್ಯ ಸ್ವಾಮಿ ಮಠದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವವನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಸಲಾಯಿತು.
ವಿವಿಧ ಹೂಗಳಿಂದ ಅಲಂಕರಿಸಿದ್ದ ಶ್ರೀ ವೀರಭದ್ರ ಸ್ವಾಮಿ ಮೂರ್ತಿಗೆ ಕಾರ್ಯ ಸ್ವಾಮಿ ಮಠಾಧ್ಯಕ್ಷ ಮಹೇಶ್ವರ ಸ್ವಾಮೀಜಿ ಬಿಲ್ವಾರ್ಚನೆ, ರುದ್ರಾಭಿಷೇಕ, ಮಹಾ ಮಂಗಳಾರತಿ ನೆರವೇರಿಸಿದರು. ನಂದಿ ಕಂಬ ವೀರಗಾಸೆ ಕುಣಿತ ಮಂಗಳ ವಾದ್ಯಗಳೊಂದಿಗೆ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ ಏರ್ಪಡಿಸಲಾಗಿತ್ತು.