ವೀರಶೈವ ಸಮಾಜದಿಂದ ದಾಸೋಹ ಏರ್ಪಡಿಸಿ ಅರ್ಥಪೂರ್ಣ ಆಚರಣೆ
ದೇವನಹಳ್ಳಿ: ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ವೀರಶೈವ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ತಿಳಿಸಿದರು.
ದೇವನಹಳ್ಳಿ ನಗರದ ಶಿವಕುಮಾರಸ್ವಾಮಿಜಿ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನಾಚರಣೆ ಅಂಗವಾಗಿ ನಾಮಫಲಕಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಶ್ರೀ ಶಿವಕುಮಾರಸ್ವಾಮಿಜಿ ಅವರ ಜಯಂತೋತ್ಸವವನ್ನು ಎಲ್ಲರೂ ಒಗ್ಗೂಡಿ ಆಚರಿಸುತ್ತಿದ್ದೇವೆ. ಪ್ರತಿ ಜನರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸುತ್ತೇವೆ ಎಂದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ರಮೇಶ್ ಮಾತನಾಡಿ, ಯಾವುದೇ ಪಕ್ಷಪಾತವಿಲ್ಲದೆ, ನಿರಾಪೇಕ್ಷವಾಗಿ, ಸ್ವಾರ್ಥತೆ ಇಲ್ಲದ ಹೃದಯವಂತರು ಶ್ರೀ ಶಿವಕುಮಾರಸ್ವಾಮೀಜಿಗಳು. ಇವರು ತ್ರಿವಿಧ ದಾಸೋಹದಲ್ಲಿ ಶಿಕ್ಷಣ, ವಸತಿ ಮತ್ತು ದಾಸೋಹದ ಕಾರ್ಯವನ್ನು ಪ್ರತಿಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಲು ಆದರ್ಶಪ್ರಿಯರಾಗಿದ್ದಾರೆ. ಇವರ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಪುರಸಭಾ ಸದಸ್ಯ ಕೋಡಿಮಂಚೇನಹಳ್ಳಿ ಎಸ್.ನಾಗೇಶ್ ಮಾತನಾಡಿ, ಸ್ವಾಮಿಗಳ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ವಿದ್ಯೆ, ವಸತಿ ಮತ್ತು ದಾಸೋಹವನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇವರಿಗೆ ಮರಣೋತ್ತರವಾಗಿ ಡಾಕ್ಟರೇಟ್ ಸ್ಥಾನಮಾನವನ್ನು ಸರಕಾರ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ, ಪುರಸಭಾ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್ ಭಾಗಿಯಾಗಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಪುರಸಭಾ ಸದಸ್ಯ ಎಸ್.ನಾಗೇಶ್, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಕಾಂತರಾಜು, ವೀರಭದ್ರಪ್ಪ, ಗಿರೀಶ್, ವಿಮಲ ಶಿವಕುಮಾರ್, ಸದಾಶಿವಯ್ಯ, ಅರ್ಚಕರಾದ ಮೋಹನ್ ಶಾಸ್ತ್ರೀ, ಶಿವಕುಮಾರ್ ಇದ್ದರು.
ಚಿತ್ರ: ೧ ಡಿಹೆಚ್ಎಲ್ ಪಿ೪
ದೇವನಹಳ್ಳಿ ನಗರದ ಶಿವಕುಮಾರಸ್ವಾಮಿಜಿ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನಾಚರಣೆ ಅಂಗವಾಗಿ ನಾಮಫಲಕಕ್ಕೆ ವಿಶೇಷ ಪೂಜೆಯನ್ನು ಸಮಾಜದ ಮುಖಂಡರು ಸಲ್ಲಿಸಿದರು.