ಕಾಂಗ್ರೆಸ್ ಲೂಟಿಯ ವಿರುದ್ದ ನಮ್ಮ ಪಾದಯಾತ್ರೆ.., ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಸಿಎಂ ಗೆ ಕಳಂಕ ಅಲ್ಲವೇ? ನಿಮ್ಮ ಆಡಳಿತಕ್ಕೆ ಕಳಂಕ ಅಂಟಿಲ್ವಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ MLC ಸಿಟಿ ರವಿ ಕೆಂಡಕಾರಿದ್ದಾರೆ. ಮೈಸೂರಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು , ಸಿಎಂ ಸಾರ್ವಜನಿಕ ಬದುಕಿನಲ್ಲಿ ಸ್ವಚ್ಚತೆ ಎಲ್ಲಿದೆ? ರೀಡೂ ಪಿತಾಮಹ ಯಾರು?.ರೀಡೂ ಹೆಸರಿನಲ್ಲಿ 884 ಎಕರೆ ಡಿ ನೋಟಿಫಿಕೇಷನ್ ಮಾಡಲಾಗಿದೆ, ಇದು ಅಕ್ರಮ ಅಲ್ವಾ? ಎಂದು ಸಿಎಂ ಸಿದ್ದುಗೆ ಸಾಲುಸಾಲು ಪ್ರಶ್ನೆಗಳನ್ನ ಕೇಳಿದ್ದಾರೆ ಸಿಟಿ ರವಿ.
ಕೆಂಪಣ್ಣ ಆಯೋಗದ ವರದಿಯಲ್ಲಿ, ಅರ್ಕಾವತಿ ಬಡಾವಣೆಯಲ್ಲಿ ಹಗರಣ ಆಗಿರುವುದು ತಪ್ಪು ಎಂದು ಸಾಬೀತಾಗಿದೆ ಅಂತ ಹೇಳಿದ ಅವರು, ಸಿಎಂ ಸಿದ್ದರಾಮಯ್ಯ ಅವರೇ ಯು ಆರ್ ನಾಟ್ ಎ ಮಿಸ್ಟರ್ ಕ್ಲೀನ್, ನೀವು ಮಿಸ್ಟರ್ ಕರಪ್ಟ್. ನೀವು ಭ್ರಷ್ಟಾಚಾರದ ಫಲಾನುಭವಿಯೂ ಹೌದು, ಪೋಷಕರೂ ಹೌದು ಎಂದು ಹೌಹಾರಿದ್ದಾರೆ.
ಸಿಎಂ ಗೆ ಸತ್ಯ ಎದುರಿಸುವ ಧೈರ್ಯವಿಲ್ಲ ಹೀಗಾಗಿ ಧೈರ್ಯ ಇಲ್ಲದ ಕಾರಣ ಪಲಾಯನವಾದಿ ಆಗಿದ್ದೀರಿ. ನೀವು ಫಲಾನುಭವಿಯಾದ ಕಾರಣ ಪಲಾಯನ ಮಾಡುತ್ತಿದ್ದೀರಿ ಅಂತ ವಾಗ್ದಾಳಿ ನಡೆಸಿದ್ದಾರೆ. ನಮಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಸಿಎಂ, ಸಚಿವರು, ಕಾಂಗ್ರೆಸ್ ಹೈಕಮಾಂಡ್ ನವರು ಗಾಬರಿ ಆಗಿದ್ದಾರೆ. ಭಯದಿಂದ ಬೆದರಿಕೆ ತಂತ್ರ ಅನುಸರಿಸಲು ಹೊರಟಿದ್ದಾರೆ ಎಂದರು.
ನಮ್ಮ ಪಾದಯಾತ್ರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧಸಿದ್ದರಾಮಯ್ಯನವರೇ 40 ವರ್ಷದಿಂದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಅಂತೀರಲ್ಲಾ,ನಿಮಗೆ ನನ್ನದೊಂದು ಪ್ರಶ್ನೆ,ಮುಡಾ ಹಗರಣ ಕಳಂಕ ಅಲ್ಲವೇ?ವಾಲ್ಮೀಕಿ ನಿಗಮದ ಹಗರಣ ಕಪ್ಪು ಚುಕ್ಕೆ ಅಲ್ಲವೇ? ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕೆಪಿಟಿಟಿ ಆಕ್ಟ್ ಉಲ್ಲಂಘನೆ ಕಪ್ಪು ಚುಕ್ಕೆ ಅಲ್ಲವೇ?. ಎಂದು ಸಿಎಂ ಸಿದ್ದರಾಮಯ್ಯಗೆ ಸಾಲು ಸಾಲು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ ಸಿ ಟಿ ರವಿ.
ಸುದ್ದಿಗೋಷ್ಠಿಯಲ್ಲಿ ಶಾಸಕ ಶ್ರೀವತ್ಸ, ಎಂಎಲ್ಸಿ ಸಿ ಎನ್ ಮಂಜೇಗೌಡ, ಸಾ ರಾ ಮಹೇಶ್, ರಾಜ್ಯ ಬಿಜೆಪಿ ವಕ್ತಾರ ಎಂ ಜಿ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಾಗಿದ್ದರು.