ಪ್ರತಿನಿಧಿ ವರದಿ ಸರಗೂರು
ತಾಲೂಕಿನ ಹಿಂದು ಹಿತರಕ್ಷಣಾ ಸಮತಿ ವತಿಯಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದಂಗೆಯಲ್ಲಿ ಹಿಂದೂ ಧರ್ಮದ ದೇವಸ್ಥಾನಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದು, ಹಿಂದುಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಮತ್ತು ವಿಶ್ವ ಸಂಸ್ಥೆ ಮಧ್ಯಪ್ರವೇಶಿಸಿ ನ್ಯಾಯ ಒದಗಿಸ ಬೇಕೆಂದು ಭಿತ್ತಿಪತ್ರಗಳನ್ನಿಡಿದು ಮೌನವಾಗಿ ಪ್ರತಿಭಟಿಸಿದರು.
ಬಜರಂಗದಳ ತಾ.ಸಂಯೋಜಕ ಆನಂದ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುನಂದರಾಜ್, ಮೈಲಾರಿ, ಪಪಂ ಸದಸ್ಯ ನೂರಾಳಸ್ವಾಮಿ, ಮುಖಂಡರಾದ ರಾಮು, ರವಿಕುಮಾರ್, ರವಿಗೌಡ, ಲೋಕೇಶ್, ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಹಂಚೀಪುರ ಗುರುಸ್ವಾಮಿ, ಅಭಿ ಅನಿಲ್ ರಮೇಶ ಹಾಜರಿದ್ದರು.