ಮೈಸೂರಿನ ಡಾ. ಭೈರಪ್ಪ ಮತ್ತು ಪ್ರೊ. ಪ್ರಧಾನ್ ಗುರುದತ್ತ ,ಅವರು ಸೆಮಿನಾರ್ನಲ್ಲಿ ಭಾಗವಹಿಸಲು ಲಕ್ನೋಗೆ ಬಂದಿದ್ದರು ಮತ್ತು ಅವರು ಯೋಗಿ ಆದಿತ್ಯನಾಥ್ ಅವರೊಂದಿಗೆ ಅಪಾಯಿಂಟ್ಮೆಂಟ್ ಕೇಳಿದರು. ಡಾ. ಭೈರಪ್ಪ ಮತ್ತು ಯುಪಿ ಸಿಎಂ ಅವರು ಸೌಜನ್ಯಯುತ ಭೇಟಿಯಾಗಿದ್ದು, ಕೆಲವು ವಿಷಯಗಳ ಕುರಿತು ಮಾತುಕತೆ ನಡೆಸಿದರು ಎಂದು ವರದಿಗಳು ತಿಳಿಸಿವೆ.
ಡಾ.ಭೈರಪ್ಪ ಮತ್ತು ಪ್ರೊ.ಪ್ರಧಾನ ಗುರುದತ್ತ ಅವರು ಜನವರಿ 22 ರಂದು ಶ್ರೀರಾಮ ಮಂದಿರದ ಶಂಕುಸ್ಥಾಪನೆಗಾಗಿ ಅಯೋಧ್ಯೆಯಲ್ಲಿದ್ದಾರೆ.
ಕಟ್ಟಾ ಹಿಂದೂವಾದಿಯಾದ ಎಸ್ ಎಲ್ ಭೈರಪ್ಪನವರು ಈ ಹಿಂದೆ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನದಲ್ಲೂ ಭಾಗವಹಿಸಿದ್ದರು. ಅಲ್ಲದೆ, ಹಲವಾರು ಬಾರಿ ರಾಮನ ಕುರಿತಾಗಿ ಭಾಷಣಗಳಲ್ಲಿ ಪ್ರಸ್ತಾಪ ಮಾಡಿರುವ ಅವರು, ‘ರಾಮ ಆದರ್ಶ ವ್ಯಕ್ತಿ, ಆತ ಎಂದಿಗೂ ಹಿಂಸೆಯ ಮಾರ್ಗವನ್ನು ಅನುಸರಿಸುತ್ತಿರಲಿಲ್ಲ ‘ ಎಂದಿದ್ದಾರೆ. ಇದಲ್ಲದೆ, ತಮ್ಮ ‘ಆವರಣ’ ಕಾದಂಬರಿಯಲ್ಲಿ ದೇವಾಲಗಳ ಕೆಡಗಿ ಮಸೀದಿಗಳನ್ನು ಕಟ್ಟಿದ ಐತಿಹಾಸಿಕ ವಿಷಯವನ್ನೇ ಕತೆಯಾಗಿಸಿದ್ದರು.