ಮೈಸೂರು: ಇಡೀ ದೇಶಕ್ಕೆ ಬುದ್ದಿ ಹೇಳುವ ದೇವೇಗೌಡರು ತಮ್ಮ ಮಗನಿಗೆ ಏಕೆ ಬುದ್ದಿ ಹೇಳುತ್ತಿಲ್ಲ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತಾಡಿದ ಅವರು,ಕುಮಾರಸ್ವಾಮಿ ಕೆಲಸ ಮಾಡದೆ ಮೂರು ದಿನಕ್ಕೆ ಬಂದು ಮಾತನಾಡುತ್ತಿದ್ದಾರೆ. ಈ ಬಗ್ಗೆ ದೇವೇಗೌಡರು ಕುಮಾರಸ್ವಾಮಿಗೆ ಬುದ್ದಿ ಹೇಳದೆ ಇರುವುದು ಸೋಜಿಗವಾಗಿದೆ. ನಾನು ಕೃಷಿ ಮಂತ್ರಿಯಾಗಿ ಕೃಷಿ ಅಭಿವೃದ್ದಿ ಮಾಡುತ್ತಿದ್ದೇನೆ. ಕೈಗಾರಿಕಾ ಮಂತ್ರಿಯಾಗಿ ಕೈಗಾರಿಕಾ ಅಭಿವೃದ್ದಿ ಮಾಡಲಿ. ನಾಯಿ ನರಿ ಹಂದಿ ಪದ ಬಳಕೆ ಮಾಡಿದ್ದಾರೆ. ಅವರ ಪ್ರಕಾರ ಅವರೊಬ್ಬರೆ ಸಭ್ಯಸ್ಥರು ಅಂದುಕೊಂಡಿದ್ದಾರೆ. ಇದೆನೆಲ್ಲಾ ಕುಮಾರಸ್ವಾಮಿ ಅವರು ಬಿಡಬೇಕು ಎಂದು ಟಾಂಗ್ ನೀಡಿದ್ದಾರೆ. ನಾನು ಸಿಎಂ ರೇಸ್ನಲ್ಲಿ ಇಲ್ಲ ಸಿಎಂ ಸ್ಥಾನ ಖಾಲಿ ಇಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿ ಒಳ್ಳೆ ಜವಾಬ್ದಾರಿ ಅದನ್ನ ನಿಭಾಯಿಸಿದ್ದೇನೆ ಎಂದಿದ್ದಾರೆ.
ಮುಡಾದಲ್ಲಿ 50:50 ಅನುಪಾತದಲ್ಲಿ ಅಕ್ರಮ ವಿಚಾರವಾಗಿ ಮಾತನಾಡಿ, 50 50 ಲೀಗಲ್ ಅಲ್ಲ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸೈಟ್ಗೆ ಅನುಪಾತ ಜಾಸ್ತಿ ಇದೆ ಎಂದು ನನಗೆ ಡೌಟ್ ಇದೆ ಎಂದಿದ್ದಾರೆ. ಖರ್ಗೆ ಜಾರಕಿ ಹೊಳಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಾನು ಕೂಡ ಖರ್ಗೆಯವರನ್ನು ಭೇಟಿ ಮಾಡಿದ್ದೆ. ಮಇಡಿಯಿಂದ ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ಊಹಾಪೋಹ. ಕೇಂದ್ರದಿಂದ ಇಡಿ, ಸಿಬಿಐ ದುರ್ಬಳಕೆ ಆಗುತ್ತಿದೆ. ಕಾಂಗ್ರೆಸ್ ಇದ್ದಾಗ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಎಲ್ಲರ ಮೇಲೂ ಕಾರ್ಯಾಚರಣೆ ನಡೆದಿದೆ. ಈಗ ವಿರೋಧ ಪಕ್ಷದ ಮೇಲೆ 90%, ಅವರ ಮೇಲೆ 1% ಆಗುತ್ತಿದೆ. ಲೋಕಾಯುಕ್ತ ದುರುಪಯೋಗ ಆಗುತ್ತಿಲ್ಲ.
ಇಡಿ ಸಿಬಿಐ ನಿಮ್ಮನ್ನು ಟಾರ್ಗೆಟ್ ಮಾಡಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನನ್ನ ಬಳಿ ಇರೋದು ಪಂಚೆ ಶರ್ಟ್ ಮಾತ್ರ, ಇಡಿಗೆ ಅದೇ ಸಿಗೋದು ಎಂದಿದ್ದಾರೆ.
ಇನ್ನು ಸಿಎಂ ಬದಲಾವಣೆಯ ಚರ್ಚೆ ನಮ್ಮ ಪಕ್ಷದಲ್ಲಿ ನಡೆದಿಲ್ಲ. ನಮ್ಮ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ. ಪಕ್ಷ ರಾಜೀನಾಮೆಗೆ ಹೇಳಿಲ್ಲ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದಾರೆ. ಡಿಕೆ ಶಿವಕುಮಾರ್ ಸಹಾ ಅದೇ ಹೇಳಿದ್ದಾರೆ. ಇದೆಲ್ಲಾ ಕೇವಲ ಊಹಾಪೋಹ. ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಜೋಡೆತ್ತಿನ ರೀತಿ ಸರ್ಕಾರ ಮುಂದುವರಿಸುತ್ತಾರೆ. ಅಂತ ಚಲುವರಾಯಸ್ವಾಮಿ ಹೇಳಿದ್ರು.