ಸಿ.ವಿ.ರಾಮನ್ ನಗರ : ಮಹಾರುದ್ರನಿಗೆ ರುದ್ರಯಾಗ ಹಾಗೂ ಸುಮಂಗಲಿಯರಿಗೆ ಅರಿಶಿನ ಕುಂಕುಮ ವಿತರಣೆ ಹಾಗೂ ಕೈಂಕಾರ್ಯಗಳನ್ನು ಮಹರ್ಷಿ ಶ್ರೀ ಆನಂದ್ ಗುರೂಜೀ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜಸೇವೆಕ ಆರ್.ಕೆ ಶ್ರೀಧರ್ ಕೃಷ್ಣಪ್ಪ ತಿಳಿಸಿದರು.
ನಗರದ ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿನ ನಾಗವಾರಪಾಳ್ಯದ ಮುತ್ಯಾಲಮ್ಮ ದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ ವಿಶೇಷ ಪೂಜೆ ಹಾಗೂ ಯಾಗದಲ್ಲಿ ಭಾಗಿಯಾಗಿ ಮಾತನಾಡಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಿ, ನಾಡಿನಲ್ಲಿ ಸುಭಿಕ್ಷೆ ಕಾಣಲೆಂದು, ಬೇಡಿದ ವರಗಳನ್ನು ಶೀಘ್ರವಾಗಿ ದಯಪಾಲಿಸುವಂತಹ ಕಲಿಯುಗದ ಕಲ್ಪವಲ್ಲಿ ತಾಯಿ ಮುತ್ಯಾಲಮ್ಮನ ಸಾನಿಧ್ಯದಲ್ಲಿ, ಮಹಾರುದ್ರನಿಗೆ ರುದ್ರಯಾಗ ಹಾಗೂ ಸುಮಂಗಲಿಯರಿಗೆ ಅರಿಶಿನ ಕುಂಕುಮ ವಿತರಣೆಯನ್ನು ಅಭಿಜಿನ್ ಮುಹೂರ್ತದಲ್ಲಿ ಮಹರ್ಷಿಗಳ ಮಾರ್ಗದರ್ಶನಲ್ಲಿ ಮಾಡಲಾಗಿದೆ ಎಂದರು.
ಮಹರ್ಷಿಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಭಾರಮಾಡಿಕೊಂಡರು, ಹೆಣ್ಣುಮಕ್ಕಳು ತಲೆಯ ಮೇಲೆ ಕಳಸ ಹೊತ್ತು ಸ್ವಾಗತ ಕೊರಿದರು. ಗುರುಜೀ ಅವರ ಆಶೀರ್ವಾಚನ ಕೇಳಿ ಭಕ್ತರು ಪುನೀತರಾದರು.
ಇದೇವೇಳೆ ಭಕ್ತರಿಗೆ, ಪುಟ್ಟ ಮಕ್ಕಳಿಗೆ ಮತ್ತು ಕುಮಾರಿಯರಿಗೆ ವಸ್ತ್ರದಾನ, ಅನ್ನದಾಸೋಹ ಹಾಗೂ ದಂಪತಿ ಪೂಜೆ, ಗುರು-ಹಿರಿಯರ ಅಜ್ಞೆಯಂತೆ ರಾಜ್ಯದ ಹಿತಕ್ಕಾಗಿ ಈ ಭಾಗದ ಪ್ರತಿಯೊಬ್ಬರ ಸಮಸ್ಯೆಗಳ ಪರಿಹಾರಕ್ಕಾಗಿ, ಮಹಾರುದ್ರಯಾಗದಿಂದ ಒಳ್ಳೆಯದಲ್ಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಗುರುಜೀ, ಹಿರಿಯ ಮುಖಂಡ ಹೂಡಿ ವಿಜಯ್ ಕುಮಾರ್, ಎಸ್.ಆನಂದ್ ಕುಮಾರ್, ವಕೀಲರಾದ ಜಿ.ನಾರಾಯಣ ಸ್ವಾಮಿ, ಗಜೇಂದ್ರ (ಗಜ್ಜಿ) ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿದರು.