ಪ್ರತಿನಿಧಿ ವರದಿ ಕಿಕ್ಕೇರಿ
ಹೋಬಳಿಯಾದ್ಯಂತ ಆಷಾಢಮಾಸದ ಶುಕ್ರವಾರ ಶಕ್ತಿದೇವಿ ಮೂರ್ತಿಗೆ ವಿಶೇಷ ಅಲಂಕಾರ, ಪೂಜೆಗಳು ನಡೆದವು.
ಪಟ್ಟಣದ ಬ್ರಹ್ಮೇಶ್ವರ ದೇವಾಲಯದ ಪಾರ್ವತಿದೇವಿ, ಕಿಕ್ಕೇರಮ್ಮ ದೇವಿ, ಅಂಗಳಪರಮೇಶ್ವರಿ, ಚಿಕ್ಕಮಂದಗೆರೆಯ ಚಾಮುಂಡೇಶ್ವರಿ, ಮಾದಾಪುರದ ಕೆಂಕೇರಮ್ಮ ದೇವಿ, ವಡಕಹಳ್ಳಿ ಗ್ರಾಮದ ಚಿಕ್ಕಳಮ್ಮ, ಊಗಿನಹಳ್ಳಿ ಸಿಂಗಮ್ಮ, ಮಂದಗೆರೆಯ ಕಟ್ಟೆಪರಮೇಶ್ವರಿ ದೇವಾಲಯಗಳಲ್ಲಿ ದೇವಿಗೆ ವಿಶೇಷವಾಗಿ ಪೂಜಾಸೇವೆಗಳು ನಡೆದವು.
ಕಿಕ್ಕೇರಿ ಕಿಕ್ಕೇರಮ್ಮ ದೇವಿ, ಬ್ರಹ್ಮೇಶ್ವರ ದೇಗುಲದ ಪಾರ್ವತಿದೇವಿ, ಬೇವಿನಹಳ್ಳಿ ಚಾಮುಂಡೇಶ್ವರಿ ದೇವಿಗೆ ವಿಶೇಷವಾಗಿ ಪರಿಮಳ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಜಿಟಿ ಮಳೆಯನ್ನು ಲೆಕ್ಕಿಸದೆ ದೇಗುಲಕ್ಕೆ ತೆರಳಿ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ದೇವಿಗೆ ಆರತಿ ಎತ್ತಿ, ಹಣ್ಣು ಕಾಯಿ ಅರ್ಪಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು.
೧೯ಕೆಕೆಆರ್೧: ಕಿಕ್ಕೇರಿ ಗ್ರಾಮದೇವಿ ಕಿಕ್ಕೇರಮ್ಮನವರಿಗೆ ಆಷಾಢ ಶುಕ್ರವಾರ ವಿಶೇಷ ಅಲಂಕಾರ ಮಾಡಿ, ವಿಶೇಷ ಪೂಜಾಲಂಕಾರ ಮಾಡಲಾಗಿತ್ತು.