ಪ್ರತಿನಿಧಿ ವರದಿ ಸರಗೂರು
ಪಟ್ಟಣದ 11ನೇ ವಾರ್ಡನ ಬಿಡಗಲಿನಲ್ಲಿ ಶ್ರೀ ಮುಳ್ಳೂರಮ್ಮನವರ ಜಾತ್ರೆ ಮತ್ತು ಕೊಂಡೋತ್ಸವ ಮಹೋತ್ಸವ ಭಕ್ತರು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಪಡವಲು ವಿರಕ್ತ ಮಠ ಮಠಾಧ್ಯಕ್ಷರಾದ ಮಹಾದೇವಸ್ವಾಮೀಜಿ ಅವರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕರಿಸಿ ರಂಗೋಲಿ ಬಿಡಿಸಿ, ಊರಿನ ಮುಂಭಾಗದಿಂದ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಜ್ಜಗಿದ್ದ ದೇವಸ್ಥಾನದ ಸುತ್ತಮುತ್ತ ಹೂವಿನ ಹಾರದಿಂದ ದೇವಸ್ಥಾನ ಮಾಡಲಾಯಿತು.
ಮೇ 6 ರಂದು ರಾತ್ರಿಯಿಂದಲೇ, ಗಣಪತಿ ಹೋಮ, ಪುಣ್ಯಾಹ, ಕಳಸ ಪ್ರತಿಷ್ಠಾಪನೆ , ದುರ್ಗಾ ಹೋಮ, ಕುಂಕುಮಾರ್ಚನೆ ಕೈಂಕರ್ಯಗಳು ಜರುಗಿದವು. ಮೇ 7 ರಂದು ಬೆಳಗ್ಗೆ ಕಪಿಲಾ ನದಿಗೆ ತೆರಳಿ ರಥಕ್ಕೆ ಗಂಗೆ ಪೂಜೆ ಸಲ್ಲಿಸಿ, ರಥೋತ್ಸವವನ್ನು ಲೋಕಾರ್ಪಣೆ ಮಾಡಲಾಯಿತು.
ರಥವನ್ನು ಹೂವಿನಿಂದ ಅಲಂಕಾರ ಮಾಡಿ, ನಂತರ ತಾಯಿ ಮುಳ್ಳೂರಮ್ಮನ ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಿಡುಗಲು ಗ್ರಾಮದ ಪ್ರಮುಖ ರಸ್ತೆ ಮುಖಾಂತರ ಉತ್ಸವದ ಮೆರವಣಿಗೆಯನ್ನು ಮಂಗಳವಾದ್ಯ, ಸತ್ತಿಗೆ, ವೀರಗಾಸೆ ಕುಣಿತ ಹಾಗೂ ಕಲಾತಂಡಗಳ ಜೊತೆ ಮೆರವಣಿಗೆ ಮಾಡಿ ಬಂದು ದೇವಸ್ಥಾನಕ್ಕೆ ತಲುಪಿತು.
ಅಮ್ಮನವರಿಗೆ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.ಭಕ್ತರು ಅಮ್ಮನವರ ದರ್ಶನ ಪಡೆದರು. ಬಂದ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಯಿತು.