ಪ್ರತಿನಿಧಿ ವರದಿ ಮಾಲೂರು
ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಕಾಂಗ್ರೆಸ್ ಪಕ್ಷದಿ೦ದ ರ್ಸ್ಪಧಿಸಿರುವ ಡಿ.ಟಿ.ಶ್ರೀನಿವಾಸ್ ಅವರಿಗೆ ಜೂ.3ರ೦ದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ ಮತಗಳನ್ನು ನೀಡುವಂತೆ ಶಾಸಕ ಕೆ.ವೈ.ನಂಜೇಗೌಡ ಮನವಿ ಮಾಡಿದರು.
ಪಟ್ಟಣದ ಎಸ್ಎಫ್ಎಸ್ ಶಾಲೆ, ಬಾಪೂಜಿ ವಿದ್ಯಾಸಂಸ್ಥೆ, ಕೆಎಲ್ಇ ಶಾಲೆಗಳಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಿ.ಟಿ.ಶ್ರೀನಿವಾಸ್ ಅವರ ಪರವಾಗಿ ಮತಯಾಚನೆ ಸಭೆಯಲ್ಲಿ ಮಾತನಾಡಿದರು.
ಡಿ.ಟಿ.ಶ್ರೀನಿವಾಸ್ ಅವರಿಗೆ ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ. ಕ್ಷೇತ್ರದಲ್ಲಿ ಇದುವರೆಗೂ ಗೆಲುವು ಪಡೆದಿರುವಂತಹ ಅಭ್ಯರ್ಥಿ ಶಿಕ್ಷಕರ ಪರವಾಗಿ, ಉಪನ್ಯಾಸಕರ ಪರವಾಗಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹಾಗಾಗಿ ಈ ಬಾರಿ ಆಗ್ನೇಯ ಕ್ಷೇತ್ರದ ಶಿಕ್ಷಕರು ಖಂಡಿತವಾಗಿಯೂ ಬದಲಾವಣೆ ಬಯಸಿದ್ದು, ಡಿ.ಟಿ.ಶ್ರೀನಿವಾಸ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೊಸಗೆರೆ ಗ್ರಾಪಂ ಅಧ್ಯಕ್ಷ ಪಿ.ಎಸ್.ವಿನಯ್ಗೌಡ, ಕಸಾಪ ತಾಲೂಕು ಅಧ್ಯಕ್ಷ ಹನುಮಂತಪ್ಪ, ಯಾದವ ಸಂಘದ ತಾಲೂಕು ಅಧ್ಯಕ್ಷ ಎಚ್.ವೈ.ಗೋವಿಂದಪ್ಪ, ಮಾದನಹಟ್ಟಿ ರವಿಕುಮಾರ್, ಪ್ರಾಂಶುಪಾಲ ಫಾದರ್ ಶೋಬಿ ತಮಾಸ್, ವ್ಯವಸ್ಥಾಪಕ ಫಾದರ್ ಸೇಲ್ವಧರ್, ಆಡಳಿತ ಅಧಿಕಾರಿ ಫಾದರ್ ಅನಿಶ್ ಅಬ್ರಹಾಂ, ಶಿಕ್ಷಕರಾದ ವೆಂಕಟೇಶಪ್ಪ, ಎಚ್.ಸಿ.ಸುರೇಂದ್ರಗೌಡ, ಶ್ರೀನಿವಾಸ್, ವಿಜಯಶಂಕರ್, ವೆಂಕಟಾಚಲಪತಿ, ರಾಣಿ, ಗ್ಲೋರಿಯಾ ಇನ್ನಿತರರು ಹಾಜರಿದ್ದರು.