ಕವಿತೆ ವಾಚಿಸಿದ ಬಳೆಪೇಟೆ ಪ್ರಕಾಶ್
ಪ್ರತಿನಿಧಿ ವರದಿ ಯಳಂದೂರು
ಪಟ್ಟಣದ ಬಳೆಪೇಟೆ ನಿವಾಸಿಯಾದ ಪ್ರಕಾಶ್ ಅವರು ಕಿತ್ತೂರು ರಾಣಿ ಚೆನ್ನಮ್ಮ ಜಿ ಅವರ 2ನೇ ವಿಜಯೋತ್ಸವದ ನಿಮಿತ ಚೆನ್ನಮ್ಮಜಿಯವರ ಐಕ್ಯ ಕ್ಷೇತ್ರವಾದ ಬೈಲಹೊಂಗಲ ಪಟ್ಟಣದಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅತ್ಯುತ್ತಮ ಸ್ಥಾನ ಗಳಿಸಿದ್ದಾರೆ. ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಜಿಲ್ಲೆಯ ಹೆಸರನ್ನು ಹಲವು ಭಾಗಗಳಲ್ಲಿ ಪಸರಿಸುವ ಕವಿ ಪ್ರಕಾಶ್ ರವರ ಕವಿತೆಗೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.