ಹೆಚ್.ಡಿ. ಕೋಟೆ :ಎಚ್.ಡಿ. ತಾಲೂಕಿನಲ್ಲಿ, ಇದೇ ಮೊದಲ ಭಾರಿಗೆ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಶ್ರೀ ರಾಮಾಂಜನೇಯ ಕುಸ್ತಿ ಸಂಘದ ತಾಲೂಕು ಅಧ್ಯಕ್ಷ ಜಿ. ನಂದೀಶ್ ತಿಳಿಸಿದರು.
ಪಟ್ಟಣದ ಪತ್ರಕರ್ತ ಸಂಘದ ಆವರಣದಲ್ಲಿ ಶನಿವಾರ ನಡೆದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕುಸ್ತಿ ಪಂದ್ಯಾವಳಿಯನ್ನು ಜೂ.15 ರಂದು ಪಟ್ಟಣದ ಪುರಸಭೆ ಎದುರು ಸಂತೆ ಮೈದಾನದಲ್ಲಿ ಆಯೋಜಿಸಲಾಗಿದ್ದು, ಪಂದ್ಯಾವಳಿಯಲ್ಲಿ ಮಾರ್ಪಿಟ್ ಕುಸ್ತಿಪಟುಗಳಿಗೆ ಮೊದಲ ಬಹುಮಾನ ಬೆಳ್ಳಿಗದೆ, ಹಾಗೂ ಒಂದು ಗಂಟೆ ಮತ್ತು ಅರ್ಧ ಗಂಟೆ ಕುಸ್ತಿ ಗಳಲ್ಲಿ ಜಯಗಳಿಸಿದವರಿಗೆ ಎರಡು ಕಂಚಿನ ಗದೆ, ಉಳಿದ ಕುಸ್ತಿಪಟುಗಳಿಗೆ ಸೂಕ್ತ ಬಹುಮಾನ, ನಗದು ಬಹುಮಾನ , ಆಕರ್ಷಿತ ಟ್ರೋಫಿ, ನೀಡಲಾಗುವುದು ಎಂದರು.
ಪೈಲ್ವಾನ್ ಎನ್.ನಾಗೇಶ್ ಮಾತನಾಡಿ, ಪಂದ್ಯಾವಳಿಯಲ್ಲಿ 40 ಜೋಡಿ ಸ್ಪರ್ಧಿಗಳು ಭಾಗವಹಿಸಲಿದ್ದು, ಶಾಸಕ ಅನಿಲ್ ಚಿಕ್ಕಮಾದು, ಚಲನಚಿತ್ರ ಹಿರಿಯ ನಟ ದೊಡ್ಡಣ್ಣ, ನಾಯಕ ನಟ ಧೃವಸರ್ಜಾ, ಇನ್ನು ಅನೇಕ ಸಾಧಕರು ರಾಜ್ಯದ ವಿವಿಧ ಪಕ್ಷದ ನಾಯಕರು ವಿವಿಧ ಯುವ ಕ್ರೀಡಾ ಸ್ಪರ್ಧಿಗಳು, ಹಿರಿಯ ಗೌರವಾನ್ವಿತರು, ಸೇರಿದಂತೆ ಅನೇಕರು ಆಗಮಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಅಧ್ಯಕ್ಷ ನಂದೀಶ್ ಉಪಾಧ್ಯಕ್ಷ ನಿಂಗಪ್ಪ ಜಯಮಾಲಾ, ಕಾರ್ಯದರ್ಶಿ ನಾಗೇಶ್, ಸಹ ಕಾರ್ಯದರ್ಶಿ ಪೂರ್ಣೇಶ್, ಖಜಾಂಚಿ ಚಂದ್ರಮೌಳಿ, ಕಾನೂನು ಸಲಹೆಗಾರ ನಾಗೇಶ್, ನಿರ್ದೇಶಕರಾದ ಬಿಡಗಲು ರಾಜು, ಮುತ್ತುರಾಜ್ ಹಾಜರಿದ್ದರು.