ಪ್ರತಿನಿಧಿ ವರದಿ ಮಾಲೂರು
ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ರಸ್ತೆಗೂ ಹಕ್ಕು ಪತ್ರ ನೀಡಿರುವ ಗ್ರಾಮ ಲೆಕ್ಕಿಗ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೊಡ್ಡ ಕಡತೂರು ಗ್ರಾಮಸ್ಥರು ಒತ್ತಾಯಿಸಿದರು.
ಹುಂಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಕಡತೂರು ಗ್ರಾಮದಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗ್ರಾಮ ಲೆಕ್ಕಿಗ ಅಧಿಕಾರಿ ಶೋಭಾ ಅವರು ರಸ್ತೆಗೂ ಹಕ್ಕು ಪತ್ರ ನೀಡಿದ್ದಾರೆ. ಸುಮಾರು ವರ್ಷಗಳಿಂದ ದೊಡ್ಡ ಕಡತೂರು ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕೆರೆ ಅಂಗಳ ಮತ್ತು ಇನ್ನಿತರ ಸರ್ಕಾರಿ ಜಾಗಗಳಿಗೂ ಹಕ್ಕು ಪತ್ರಗಳನ್ನು ನೀಡಿದ್ದಾರೆ. ಇವರ ಹತ್ತಿರ ಯಾವುದೇ ಕೆಲಸ ಆಗಬೇಕಾದರೆ ಹಣ ನೀಡಬೇಕು ಎಂದು ಆರೋಪಿಸಿದರು.
ದೊಡ್ಡ ಕಡತೂರು ಗ್ರಾಮದಲ್ಲಿ ಹಕ್ಕು ಪತ್ರಗಳನ್ನು ನೀಡಿದ್ದು, ರಸ್ತೆಗೆ ಹಕ್ಕು ಪತ್ರ ನೀಡಿದ್ದಾರೆ ದೊಡ್ಡ ಕಡತೂರು ಕಂದಾಯ ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಿಗ ಶೋಭ ರವರು 22.23ನೇ ಸಾಲಿನಲ್ಲಿ ಮಾಲಾ ಎಂಬುವರಿಗೆ 1200 ಚದರ ಅಡಿಗಳಿಗೆ ಹಕ್ಕು ನೀಡಿದ್ದಾರೆ, ಗ್ರಾಮದ ಸ್ಮಶಾನ ಮತ್ತು ಕೆರೆ, ತೋಟಗಳಿಗೆ ಹಾದು ಹೋಗುವ ರಸ್ತೆ ಗೆ ಸ್ಥಳ ಪರಿಶೀಲನೆ ಮಾಡದೆ ಹಕ್ಕು ಪತ್ರ ನೀಡಿದ್ದಾರೆ ಅಲ್ಲದೇ ಇದೇ ಗ್ರಾಮದಲ್ಲಿ ಸುಮಾರು ಅಕ್ರಮ ಹಕ್ಕು ಪತ್ರಗಳನ್ನು ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ,
ಇನ್ನೂ ಇವರ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು ಅಕ್ರಮ ಹಕ್ಕು ಪತ್ರಗಳನ್ನು ವಜಾ ಪಡಿಸಿ ಗ್ರಾಮ ಲೆಕ್ಕ ಅಧಿಕಾರಿ ಶೋಭ ಅವರ ವಿರುದ್ಧ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರಾದ ಮುಳುಬಾಗಿಲಪ್ಪ, ಮಲ್ಲಿಕಾರ್ಜುನ, ನಂಜಪ್ಪ, ವೆಂಕಟಸ್ವಾಮಿ, ಮುಕುಂದ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.