ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಮತ್ತು ಸೊನಾಲ್ ಮಂಥೆರೋ ವಿವಾಹಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿವೆ. ಚಿತ್ರರಂಗದಲ್ಲಿ ಬಹಳ ದಿನಗಳಿಂದ ಸದ್ದು ಮಾಡ್ತಿದ್ದ ಇವರಿಬ್ಬರ ವಿವಾಹ ಇನ್ನೇನು ಜರುಗಲಿದ್ದು. ಎರಡೂ ಮನೆಯ ಕಡೆಯಿಂದ ಈಗಾಗಲೇ ವಿವಾಹದ ತಯಾರಿ ಭರ್ಜರಿಯಾಗಿ ನಡೆದಿದೆ.ಈಗಾಗಲೇ ಈ ಜೋಡಿ ಚಿತ್ರರಂಗ ಸೇರಿದಂತೆ ಸ್ನೇಹಿತರು, ಸಂಬಂದಿಕರುಗಳಿಗೆ ಮದುವೆಯ ಇನ್ವಿಟೇಷನ್ ಕೊಟ್ಟು,ಆಹ್ವಾನಿಸಲು ಶುರು ಮಾಡಿದ್ದಾರೆ.
ಸಿನಿಮಾದಲ್ಲಿ ಡಿಫರೆಂಟ್ ಆಗಿ ಯೋಚನೆ ಮಾಡಿ,ವಿಭಿನ್ನವಾಗಿ ಸಿನಿಮಾವನ್ನ ಪ್ರೇಕ್ಷಕರ ಮುಂದಿಡುವ ತರುಣ್ ಸುಧೀರ್, ಅವರ ಪ್ರೀವೆಡ್ಡಿಂಗ್ ವೀಡೀಯೋವನ್ನ ಕೂಡ ವಿಭಿನ್ನವಾಗಿ ಅಭಿಮಾನಿಗಳ ಮುಂದಿಟ್ಟಿದ್ದರು.ಇದೀಗ ಇನ್ನೂ ಒಂದು ಹಜ್ಜೆ ಮುಂದಿಟ್ಟಿರುವ ತರುಣ್ ಮತ್ತು ಸೋನಾಲ್ ಸಂಪೂರ್ಣವಾಗಿ ಪರಿಸರ ಸ್ನೇಹಿ ವಿವಾಹ ಪತ್ರಿಕೆಯನ್ನ ರೆಡಿ ಮಾಡ್ಸಿದ್ದಾರೆ.ಸಾಮಾನ್ಯವಾಗಿ ಒಂದು ಗಿಡವನ್ನ ರಿಟರ್ನ್ ಗಿಫ್ಟ್ ಆಗಿ ಕೊಡುವುದು ಅಥವಾ ಮದುವೆ ಇನ್ವಿಟೇಷನ್ ಜೊತೆಯಲ್ಲಿ ಗಿಡವನ್ನ ಕೊಡುವುದು ಸೆಲೆಬ್ರೆಟಿಗಳ ಲೆವೆಲ್ ಗೆ ಕಾಮನ್. ಆದರೆ ತರುಣ್ ಸುಧೀರ್ ಕಂಪ್ಲೀಟ್ ಥೀಮ್ ಅನ್ನ ಎಕೋ ಫ್ರೆಂಡ್ಲಿ ಆಗಿ ಡಿಸೈನ್ ಮಾಡಿ ಆಮಂತ್ರಣ ಪತ್ರಿಕೆಯನ್ನ ನೀಡಿದ್ದಾರೆ.
ಪರಿಸರ ಸ್ನೇಹಿ,’0′ ವೇಸ್ಟೇಜ್ ಇನ್ವಿಟೇಷನ್..,
ಇದೇ ಸ್ಪೆಷಲ್!
ಮದುವೆ ಮುಗಿದ ನಂತರ ಇನ್ವಿಟೇಷನ್ ಕಾರ್ಡ್ ಯಾವುದೋ ಮೂಲೆ ಸೇರುತ್ತೆ..! ಆದರೆ ತರುಣ್ ಮಾಡಿರೋ ಪ್ಲಾನ್ ಸ್ವಲ್ಪ ವಿಭಿನ್ನವಾಗಿದೆ.ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಮತ್ತು ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ನೀಡಲಾಗಿದೆ.ಮದುವೆ ಮುಗಿದ ನಂತರ ಪತ್ರಿಕೆ ಏನ್ಮಾಡೋದು ಅಂತ ಯೋಚನೆ ಮಾಡದೆ, ಪತ್ರಿಕೆಯನ್ನ ಒಂದು ಮಣ್ಣಿನ ಪಾಟ್ನಲ್ಲಿ ಹಾಕಿದರೆ ಸಾಕು, ಅದು ಮಣ್ಣಿನಲ್ಲಿ ಬೆರೆತು ಗಿಡ ಬೆಳೆಯುತ್ತೆ. ಅದಷ್ಟೇ ಅಲ್ಲದೆ ಖಾಲಿ ಪುಸ್ತಕವನ್ನ ನೀವು ಉಪಯೋಗಿಸಿದ ನಂತರ ಅದು ಮಣ್ಣು ಸೇರಿದರೆ, ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ.ಇನ್ನೂ ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಕೂಡ ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆಯನ್ನ ಸಖತ್ ಸ್ಪೆಷಲ್ ಆಗಿ ಪರಿಸರ ಸ್ನೇಹಿ ಮತ್ತು ‘೦’ ವೆಸ್ಟೇಜ್ ಕಾನ್ಸೆಪ್ಟ್ ನಲ್ಲಿ ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ.
ಮದುವೆ ಮುಗಿದ ಮೇಲೆ ಯಾವುದು ಕೂಡ ವೇಸ್ಟ್ ಅಲ್ಲ ಎಲ್ಲವೂ ಕೂಡ ಮಣ್ಣು ಸೇರಿ ಗಿಡವಾಗಲಿ ಎಂಬ ಇಕೋ ಫ್ರೆಂಡ್ಲಿ ಕಾನ್ಸೆಪ್ಟ್ ಮಾಡಿರುವ ತರುಣ್ ಸೊನಾಲ್ ಮದುವೆ ಮತ್ತಷ್ಟು ಕುತೂಹಲ ಹೆಚ್ವಿಸಿದೆ. ಮದುವೆಯ ಸಿದ್ಧತೆ ಜೋರಾಗಿಯೇ ಸಾಗಿದ್ದು, ಮದುವೆಯಲ್ಲಿ ಮತ್ಯಾವ ವಿಶೇಷತೆ ಇರಲಿದೆ ಎಂದು ಕಾದುನೋಡಬೇಕಿದೆ.