ಪ್ರತಿನಿಧಿ ವರದಿ ಚಾಮರಾಜನಗರ
ಭಾರತದ ಸಂಸ್ಕೃತಿ, ಚಿಂತನೆ ಹಾಗೂ ಸಂಸ್ಕಾರಗಳು ಜಗತ್ಪ್ರಸಿದ್ಧವಾಗಲು ಮಹನೀಯರ ಪ್ರಭಾವವೇ ಕಾರಣವೆಂದು ಸಂಸ್ಕೃತಿ ಚಿಂತಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ಎನ್ ಋಗ್ವೇದಿ ಹೇಳಿದರು.
ನಗರದ ಶಂಕರಪುರದ ಶ್ರೀರಾಮ ಮಂದಿರದಲ್ಲಿ ಬ್ರಾಹ್ಮಿ ಮಹಿಳಾ ಸಂಘ ಆಯೋಜಿಸಿದ್ದ ಶಿಕ್ಷಕರ ಹಾಗೂ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ಅವರು ವಿಶ್ವದ ಪ್ರಸಿದ್ಧ ಜ್ಞಾನಿ. ಅವರು ಭಾರತವನ್ನು ವಿಶ್ವಖ್ಯಾತಿಗೊಳಿಸಿದವರು. ಅವರ ಜ್ಞಾನದ ಪ್ರಭಾವ ಶತಮಾನಗಳಾದರು ಇಂದಿಗೂ ಮಾನವನ ಬದುಕಿನಲ್ಲಿ ಉಳಿದಿದೆ. ಆದರ್ಶಗಳು ಎಲ್ಲರಲ್ಲೂ ಸ್ಪೂರ್ತಿ, ಚೈತನ್ಯ ಹಾಗೂ ಕಾರ್ಯ ಬದ್ಧತೆಯನ್ನು ಹೆಚ್ಚಿಸುತ್ತದೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ನೀರಾವರಿ, ವಿಜ್ಞಾನ, ಕೈಗಾರಿಕೆ, ಗುಡಿ ಕೈಗಾರಿಕೆ, ಸೇತುವೆಗಳು, ಅಣೆಕಟ್ಟೆಗಳು ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಅವರು ಉತ್ತ,ಮ ಚಿಂತನೆಗಳ ಮೂಲಕ ಮಾರ್ಗವನ್ನು ನೀಡಿ, ಕೋಟ್ಯಾಂತರ ಜನರಿಗೆ ಬದುಕುವ ಹೆಜ್ಜೆಗಳನ್ನು ದಾಖಲಿಸಿದ್ದಾರೆ ಎಂದು ಸ್ಮರಿಸಿದರು.
ಎಸ್.ರಾಧಾಕೃಷ್ಣನ್ ಅವರ ಸಾಹಿತ್ಯ ಚಿಂತನೆ ಹಾಗೂ ತತ್ವಾದರ್ಶಗಳನ್ನು ಯುವ ಪೀಳಿಗೆಗೆ ಮನಮುಟ್ಟುವಂತೆ ತಿಳಿಸುವ ಕಾರ್ಯವನ್ನು ಹಿರಿಯರು ಮಾಡಬೇಕಾಗಿದೆ ಎಂದರು. ಶಿಕ್ಷಕರ ಮತ್ತು ಇಂಜಿನಿಯರ್ ದಿನಾಚರಣೆ ಅಂಗವಾಗಿ ಇತ್ತೀಚೆಗೆ ನಿವೃತ್ತ ಶಿಕ್ಷಕರಾದ ಗಾಯತ್ರಿ ರಾಮಣ್ಣ, ರಾಜೇಂದ್ರ ಪ್ರಸಾದ್ ಹಾಗೂ ನೂತನ ನಗರಸಭಾ ಉಪಾಧ್ಯಕ್ಷೆ ಮಮತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಸುದರ್ಶನ್, ಬ್ರಾಹ್ಮಿ ಮಹಿಳಾ ಸಂಘದ ವತ್ಸಲಾ ರಾಜಗೋಪಾಲ್, ರೇಖಾ, ಭಾನುಮತಿ, ಪಾರ್ವತಿ ಹಾಗೂ ಸದಸ್ಯರು ಇದ್ದರು.
27ಸಿಎಚ್ಎನ್.1: ಚಾಮರಾಜನಗರದ ಶಂಕರಪುರದ ಶ್ರೀರಾಮ ಮಂದಿರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತ ಶಿಕ್ಷಕರಾದ ಗಾಯತ್ರಿ ರಾಮಣ್ಣ, ರಾಜೇಂದ್ರ ಪ್ರಸಾದ್ ಹಾಗೂ ನೂತನ ನಗರಸಭಾ ಉಪಾಧ್ಯಕ್ಷೆ ಮಮತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.