ಪ್ರತಿನಿಧಿ ವರದಿ ಗುಂಡ್ಲುಪೇಟೆ
ತಾಲೂಕಿನ ಬೇಗೂರು ಸಮೀಪದ ಚಿಕ್ಕಾಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು.
ಶಾಲಾ ಪ್ರಾರಂಭದ ದಿನದಿಂದ ಇಂದಿನವರೆಗೂ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರನ್ನು ಕರೆದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭ ಡೋಳು ಕುಣಿತ, ಕಂಸಾಳೆ, ವೀರಗಾಸೆ, ವೀರ ಕುಣಿತದಿಂದ ಸ್ವಾಗತಿಸಿದರು.
ನಂತರ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಕಬ್ಬಳ್ಳಿ ಶಾಲೆಯ ಮುಖ್ಯ ಶಿಕ್ಷಕ ಹಂಗಳ ಸಿದ್ದರಾಜಪ್ಪ, ಶಿಕ್ಷಕರಾದವರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳ ರೀತಿಯಲ್ಲಿ ಪ್ರೀತಿಸಬೇಕು. ಅಂತಹ ಒಳ್ಳೆಯ ಗುರು ಬಳಗವನ್ನು ಪಡೆದಿದ್ದೀರಿ. ಅಂತಹ ಗುರುಗಳನ್ನು ಪಡೆದ ನೀವೆಲ್ಲರೂ ಧನ್ಯರು. ಗುರುವಿನ ಸ್ಥಾನ ಬಹಳ ದೊಡ್ಡದು ಬಹಳ ಎತ್ತರವಾದಂತದು ಭಾರತೀಯ ದರ್ಶನದಲ್ಲಿ ಗುರುವಿಗೆ ಅತ್ಯಂತ ಉನ್ನತವಾದ ಸ್ಥಾನವಿದೆ ಎಂದರು.
ಶಿವನೇ ಮುನಿಸಿಕೊಂಡರು ಗುರು ಕಾಪಾಡುತ್ತಾನೆ. ಗುರು ಮುನಿಸಿಕೊಂಡರೆ ಯಾರು ಕಾಪಾಡುತ್ತಾರೆ ಗುರುವಿಗಿಂತ ಅಧಿಕವಾದ ವಸ್ತು ಜಗತ್ತಿನಲ್ಲಿ ಯಾವುದು ಇಲ್ಲ. ವಿಜ್ಞಾನ ತಂತ್ರಜ್ಞಾನ ಎಲ್ಲವೂ ಇರಬಹುದು ಆದರೆ ಋಷಿವಾಕ್ಯ ಗುರುವಿನ ವಾಣಿ ಅವೆರಡು ಸೇರಿದಾಗ ಮಾತ್ರ ಅದಕ್ಕೆ ತನ್ನದೇ ಆದ ಶ್ರೇಷ್ಠತೆ ಬರುತ್ತದೆ ಆ ರೀತಿಯ ಸಂಗಮ ಈ ಶಾಲೆಯಲಾಗಿದೆ.ಜಗತ್ತಿನಲ್ಲಿ ಜ್ಞಾನಕ್ಕೆ ಅಸಮಾನದದ್ದು ಯಾವುದು ಇಲ್ಲ ಯಾರಿಗೆ ಶ್ರದ್ಧೆ ಇರುತ್ತದೆ ಅಂತವರಿಗೆ ಜ್ಞಾನವಿರುತ್ತದೆ. ಒಂದು ಮರದಲ್ಲಿರುವ ಹಣ್ಣುಗಳನ್ನು ಲೆಕ್ಕ ಹಾಕಬಹುದು ಆದರೆ ಮರದಲ್ಲಿರುವ ಹಣ್ಣಿನಿಂದ ಎಷ್ಟು ಮರಗಳಾಗುತ್ತವೆ ಎಂದು ಲೆಕ್ಕ ಮಾಡಲು ಆಗುವುದಿಲ್ಲ ಎಂದರು
ಒಬ್ಬ ವ್ಯಕ್ತಿ ವಿದ್ಯಾವಂತನಾದರೆ ಬುದ್ಧಿವಂತನಾದರೆ ಆ ಊರಿಗೆ ಶ್ರೇಷ್ಠತೆ. ಸಮಯವನ್ನು ಯಾರು ಸಹ ವ್ಯರ್ಥ ಮಾಡಬೇಡಿ. ಇರುವ ಸಮಯವನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಡಿವೈ.ಪಿ.ಸಿ.ಲಕ್ಷ್ಮಿಪತಿ, ಡಿ.ಎಡ್ ಪ್ರಾಂಶುಪಾಲ ಕಾಶಿನಾಥ್, ಶಿಕ್ಷಕ ಕರಿಯಪ್ಪ ,ಪ್ರೌಢಶಾಲೆ ಮುಖ್ಯ ಶಿಕ್ಷಕ ನಾಗೇಂದ್ರ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಉಮೇಶ್, ಗ್ರಾಮದ ಮುಖಂಡ ಬಿ ಎಂ ಮುನಿರಾಜು, ಮಹೇಶ್ , ಬಂಗಾರ ನಾಯಕ ಸೇರಿದಂತೆ ಹಿರಿಯ ವಿದ್ಯಾರ್ಥಿಗಳ ಬಳಗದ ಪದಾಧಿಕಾರಿಗಳು ಹಾಜರಿದ್ದರು. ಮತ್ತು ಶಾಲೆಯ ಎಲ್ಲಾ ಗುರುಗಳನ್ನು ನೆನಪಿನ ಕಾಣಿಕೆ ನೀಡಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಫೋಟೋ ಇದೆ