ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ
ಪ್ರತಿನಿಧಿ ವರದಿ ಗೋಣಿಕೊಪ್ಪ
ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಭವಿಷ್ಯಕ್ಕೆ ಲಾಭ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಸಿಐಟಿ ಕಾಲೇಜಿನ ವಿನೂತನ ಆವಿಷ್ಕಾರವಾದ ಕಾಫಿ ಕ್ರಾಫ್ ಕೇರ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೊಳಿಸಿ ಶನಿವಾರ ಮಾತನಾಡಿದರು.
ಜಿಲ್ಲೆಯ ವಿಶೇಷತೆಯ ಭಾಗವಾಗಿದೆ. ಭಾರತ ದೇಶ ವಿಶ್ವ ಮಟ್ಟದಲ್ಲಿ ವಿಶೇಷತೆಯನ್ನು ಕಾಪಾಡಿಕೊಂಡಿದೆ. ಕಾಫಿ ಉದ್ಯಮದಿಂದ ಕಾಫಿ ಬೆಳೆ ಮತ್ತು ಪ್ರಕೃತಿ ಪೋಷಣೆಗೂ ಪೂರಕ ವಾತಾವರಣ ಸೃಷ್ಠಿಯಾಗಿದೆ. ಕಾಫಿ ಬೆಳೆಯಲ್ಲಿನ ನೂತನ ತಂತ್ರಜ್ಞಾನದಿಂದ ದೇಶಕ್ಕೂ ಲಾಭವಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆ ಅಭಿವೃದ್ದಿ ಪೂರಕವಾಗಿದೆ. ಇಲ್ಲಿನ ವಾತಾವರಣ, ಪರಿಸರ ಪೋಷಣೆ ದೇಶಕ್ಕೆ ಲಾಭವಾಗಿದೆ. ಕಾಲೇಜಿನ ವಿನೂತನ ಆವಿಷ್ಕಾರವಾದ ಕಾಫಿ ಕ್ರಾಫ್ ಕೇರ್ ಮೊಬೈಲ್ ಅಪ್ಲಿಕೇಷನ್ ರೈತರಿಗೆ ವರದಾನ ಆಗಬೇಕಿದೆ ಎಂದರು.
ವಿದ್ಯಾರ್ಥಿಗಳ ಪ್ರಯತ್ನ ದೇಶಕ್ಕೆ ಲಾಭವಾಗಬೇಕಿದೆ. ಸಾಕಷ್ಟು ಯೋಜನೆಗಳು ನವೋದ್ಯಮಿಗಳ ಉದಯಕ್ಕೆ ನೆರವಾಗುತ್ತಿದೆ. ತಂತ್ರಜ್ಞಾನ ನೆರವಾಗುವಂತಾಗಬೇಕಿದೆ ಎಂದರು.
ಕೋಕೆನ್ ರೊಬೊಟಿಕ್ಸ್ ಸಿಇಒ ಕೊಕ್ಕೇಂಗಡ ದರ್ಶನ್ ಮಾತನಾಡಿ, ತಂತ್ರಜ್ಞಾನ ಭವಷ್ಯಕ್ಕೆ ನೆರವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಕೃಷಿಯಲ್ಲಿ ಕೂಡ ತಂತ್ರಜ್ಞಾನದ ಬಳಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಿದರು.
ಮೆಚ್ಚುಗೆ: ತಂತ್ರಜ್ಞಾನ ಕಾಫಿ ಬೆಳೆಗಾರರಿಗೆ ಕಾಫಿ ಬೆಳೆಯಲು ಇಳುವರಿ ಹೆಚ್ಚಿಸುವ ಕುರಿತು , ಗುಣಮಟ್ಟ ಕಾಯ್ದಕೊಳ್ಳುವ ಕುರಿತು ಅಗತ್ಯ ಮಾಹಿತಿಯನ್ನು ಒದಗಿಸುವ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ರಸಗೊಬ್ಬರ ಬಳಕೆ, ಬೆಳೆಯ ನೈಜ ಮಾರುಕಟ್ಟೆಯ ನಿರ್ದಿಷ್ಟ ಬೆಲೆ, ಮಾರುಕಟ್ಟೆಯ ಮೌಲ್ಯ ಪಡೆಯುವುದರಿಂದ ಕೃಷಿಕರಿಗೆ ಲಾಭ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಮುಕ್ಕಾಟೀರ ಸಿ ಕಾರ್ಯಪ್ಪ, ಕಾರ್ಯದರ್ಶಿ ಚಿರಿಯಪಂಡ ರಾಕೇಶ್ ಪೂವಯ್ಯ, ಉಪಾಧ್ಯಕ್ಷ ಕೆ.ಎ.ಚಿಣ್ಣಪ್ಪ ಇದ್ದರು.
ಫೋಟೋ ೨೧ ಜಿಕೆಪಿ ೦೧ ; ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಸಿ.ಐ.ಟಿ ಕಾಲೇಜಿನ ವಿನೂತನ ಆವಿಷ್ಕಾರದ ಕಾಫಿ ಕ್ರಾಫ್ ಕೇರ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೊಳಿಸಲಾಯಿತು.