ಬೆಂಗಳೂರು ಸೆ.17: ಒಂದು ದಿನ ಕಳೆದರೇ ರಾಜ್ಯಾದ್ಯಂತ ಗಣೇಶ ಚತುರ್ಥಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮನೆ, ಬೀದಿಯಲ್ಲಿ ಗಣಪತಿಯನ್ನು ಕೂರಿಸಲು ಜನರು ಈಗಾಗಲೆ ಸಿದ್ದತೆ ನಡೆಸಿದ್ದಾರೆ. ಮನೆಗಳಲ್ಲಿ ಬಣ್ಣದ ಲೈಟು ಇತ್ಯಾದಿಗಳಿಂದ ಶೃಂಗರಿಸಲಾಗುತ್ತಿದೆ. ಬೀದಿಗಳಲ್ಲಿ ಪೆಂಡಾಲ್ ಹಾಕಿ ವೇದಿಕೆಯನ್ನು ತಯಾರು ಮಾಡುತ್ತಿದ್ದಾರೆ. ರಾಜಧಾನಿಯಲ್ಲೂ ಗೌರಿ-ಗಣೇಶ ಹಬ್ಬಕ್ಕೆ ತಯಾರಿ ಜೋರಾಗಿದೆ. ಈ ಸಂಬಂಧ ಸಾಮಾಗ್ರಿಗಳ ಖರೀದಿಗೆ ಕೆ.ಆರ್.ಮಾರ್ಕೆಟ್ಟೆಯಲ್ಲಿ ಜನ ತುಂಬಿದ್ದಾರೆ.
ಹಬ್ಬದ ವಸ್ತುಗಳ ಖರೀದಿಗೆ ಮುಂದಾದ ನಗರದ ಜನರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ. ಒಂದಡೆ ಬರಗಾಲ, ಮತ್ತೊಂದಡೆ ಅಕಾಲಿಕ ಮಳೆಯಿಂದ ಹೂ-ಹಣ್ಣಿನ ದರ ಗಗನಕ್ಕೇರಿದೆ.