ಪ್ರತಿನಿಧಿ ವರದಿ ಕೊಳ್ಳೇಗಾಲ
ಹಣ ಕೊಡಲು ನಿರಾಕರಿಸಿ ನಿಂದಿಸಿದ ತನ್ನ ಹಿರಿಯ ಹೆಂಡತಿಯನ್ನು ಉರಿಸುಗಟ್ಟಿಸಿ ಹಾಗೂ ಹಲ್ಲೆಗೈದು ಕೊಲೆಗೈದ ಪತಿಗೆ ಸೋಮವಾರ ಪಟ್ಟಣದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹನೂರು ತಾಲೂಕಿನ ಹುತ್ತೂರು ಗ್ರಾಮದ ನಾಯಕರ ಹೊಸಕೇರಿ ಬೀದಿ ನಿವಾಸಿ ನಾಗ ಜೀವವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಇದೇ ಬೀದಿಯ ನಿವಾಸಿ ಅರಸಮ್ಮ ಕೊಲೆಯಾದ ಅಪರಾಧಿಯ ಹಿರಿಯ ಪತ್ನಿ.
2019 ಮಾ.12 ರಂದು ರಾತ್ರಿ 10-30 ಗಂಟೆಯಲ್ಲಿ ತನ್ನ ಹಿರಿಯ ಹೆಂಡತಿ ಮೃತ ಅರಸಮ್ಮಳ ಮನೆಗೆ ಅಪರಾಧಿ ನಾಗ ತೆರಳಿ 1 ಸಾವಿರ ರೂ. ನೀಡುವಂತೆ ಹಣ ಕೇಳಿದ್ದಾನೆ. ಈ ವಿಚಾರದಲ್ಲಿ ಇಬ್ಬರಿಗೂ ಮಧ್ಯರಾತ್ರಿಯವರೆಗೂ ಮಾತಿಗೆ ಮಾತು ಬೆಳೆದಿದೆ. ಹೊಟ್ಟೆಗೆ ಜೋರಾಗಿ ಓದ್ದು ಕೊಲೆ ಮಾಡಿದ್ದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಉಪ್ಪಾಳದ ಓಣಿಯಲ್ಲಿ ಬೀಸಾಡಿ ಬಂದಿದ್ದನು.
ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತಲ್ಲದೇ, ಪೊಲೀಸರು ತನಿಖೆ ಕೈಗೊಂಡು ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯಕ್ಕೆ ದೂಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ಅವರು ವಾದ ಮಂಡಿಸಿದ್ದರು.
ಈ ಆರೋಪಿ ನಾಗನ ವಿರುದ್ಧ ಆರೋಪ ಸಾಭೀತಾದ ಕಾರಣ ಸೋಮವಾರ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ ಅವರು, ಅಪರಾಧಿ ನಾಗನಿಗೆ ಕೊಲೆ ಅಪರಾಧಕ್ಕಾಗಿ ಜೀವಾವಧಿ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ಶಿಕ್ಷೆ ವಿಧಿಸಿದ್ದಾರೆ. ಇದರಲ್ಲಿ ದಂಡ ಪಾವತಿಸಲು ವಿಫಲರಾದರೆ ಮತ್ತೆ 6 ತಿಂಗಳ ಜೈಲು ಶಿಕ್ಷೆ. ಸಾಕ್ಷö್ಯ ನಾಶ ಅಪರಾಧಕ್ಕಾಗಿ 3 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವೀಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಮತ್ತೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
18ಕೆಜಿಎಲ್-4
ಫೋಟೋ ಶೀರ್ಷಿಕೆ:
ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಹಣ ಕೊಡಲು ನಿರಾಕರಿಸಿ ನಿಂದಿಸಿದ ತನ್ನ ಹಿರಿಯ ಹೆಂಡತಿಯನ್ನು ಉರಿಸುಗಟ್ಟಿಸಿ ಹಾಗೂ ಹಲ್ಲೆಗೈದು ಕೊಲೆ ಮಾಡಿದ ಪತಿಗೆ ಸೋಮವಾರ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುವ ಮಾಹಿತಿಯುಳ್ಳ ಪತ್ರಿಕಾ ಹೇಳಿಕೆ ಪ್ರತಿ ಇದೆ.