- ವಿದ್ಯುತ್ ಕಂಬಕ್ಕೆ ವಾಹನ ಡಿಕ್ಕಿ
ಪ್ರಿತಿನಿಧಿ ವರದಿ ಬೇಲೂರು
ತಾಲೂಕಿನ ಅರೇಹಳ್ಳಿಯ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ವಾಹನವೊಂದು ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ವಾಹನ ಜಖಂಗೊಂಡಿದೆ.
ಚಾಲಕನ ಅಜಾಗರೂಕತೆಯಿಂದ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ೨ ಕಂಬಗಳು ತುಂಡಾದ ಪರಿಣಾಮ ೧೫ ಮನೆಗಳು ಕತ್ತಲೆಯಲ್ಲಿ ಕಳೆಯುವಂತಹ ಸ್ಥಿತಿಯಾಗಿದೆ.
ವಾಹನ ಚಾಲಕ ಲಕ್ಷ್ಮಣ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು ಲಿಂಗಾಪುರದ ಮಲ್ಲೇಶ್ ಗೌಡ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಖಾಸಗಿ ಕೆಲಸದ ನಿಮಿತ್ತ ಅರೇಹಳ್ಳಿ ಪಟ್ಟಣಕ್ಕೆ ಬಂದು ವಾಪಸ್ಸಾಗುತ್ತಿದ್ದ ವೇಳೆ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿದ ಎಡಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಂಬ ನೆಲದಿಂದ ಹೊರಬಂದು ಹತ್ತು ಅಡಿಯಷ್ಟು ದೂರಕ್ಕೆ ತಳ್ಳಲ್ಪಟ್ಟು ವಾಹನದ ಮೇಲೆ ಮುರಿದು ಬಿದ್ದಿದ್ದರಿಂದ ಮುಂಭಾಗ ಜಖಂ ಆಗಿದೆ. ಇದ್ದರಿಂದ, ಮತ್ತೊಂದು ವಿದ್ಯುತ್ ಕಂಬ ತುಂಡಾದ ಪರಿಣಾಮ ವಾಹಕಗಳು ನೆಲದ ಮೇಲೆ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಕ್ರೇನ್ ಬಳಸಿ ವಾಹನದ ಮೇಲೆ ಬಿದ್ದಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲಾಯಿತು. ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ಮುಖ್ಯ ರಸ್ತೆಯಲ್ಲಿ ತೆರಳುವ ವಾಹನ ಸವಾರರಿಗಿ ಆಗಬಹುದಾಗಿದ್ದ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.