ಹನೂರು: ಗೌರಿಗಣೇಶ ಹಬ್ಬದ ಪ್ರಯುಕ್ತ ಶಾಸಕ ಎಂ.ಆರ್.ಮಂಜುನಾಥ್ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಹಬ್ಬದ ಶುಭಾಶಯಗಳನ್ನು ಕೋರಿದರು.
ನಂತರ ಮಾತನಾಡಿ, ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಾಗೂ ಕ್ಷೇತ್ರದ ಜನತೆಯ ರೈತಪಿ ವರ್ಗದ ಎಲ್ಲರೂ ಸಹ ಸುಭಿಕ್ಷೆಯಿಂದ ಇರಲು ಈ ಬಾರಿ ಉತ್ತಮ ಮಳೆಯಾಗಿದೆ. ಹಲವು ಕೆರೆಕಟ್ಟೆಗಳು ಸಹ ತುಂಬಿ ಭರ್ತಿಯಾಗಿದೆ. ಹೀಗಾಗಿ ಉತ್ತಮ ಮಳೆ ಬೆಳೆ ಆಗಿ ರೈತರಿಗೆ ಉತ್ತಮ ಬೆಂಬಲ ಬೆಲೆ ದೊರಕುವ ಮೂಲಕ ರೈತರ ಬದುಕು ಹಸನಾಗಲಾಗಲಿ ಮತ್ತು ಗ್ರಾಮಸ್ಥರು ಸಹ ಆರ್ಥಿಕವಾಗಿ ಮುನ್ನಡೆಯಲು ಗೌರಿ ಗಣೇಶ ಹಬ್ಬ ಎಲ್ಲರಿಗೂ ಶುಭ ತರಲಿ ಎಂದರು.
ಮುಖಂಡರಾದ ಪ್ರಶಾಂತ್ ಕುಮಾರ್, ವಿಜಯ್ ಕುಮಾರ್, ಶ್ರೀರಂಗಂ, ಯಾರಂಬಡಿ ಹುಚ್ಚಯ್ಯ, ರಾಜೇಂದ್ರ, ಮಹದೇವ್, ತಂಗವೇಲು, ಮುರುಗೇಶ್, ರಾಮು, ಅರುಲ್ ಸ್ವಾಮಿ ಉಪಸ್ಥಿತರಿದ್ದರು.