ಮೈಸೂರು: ಸಂಸತ್ನಲ್ಲಿ ಯುವಕರಿಂದ ಕೋಲಾಹಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ವಿಜಯನಗರದಲ್ಲಿರುವ ಆರೋಪಿ ಮನೋರಂಜನ್ ಮನೆಗೆ ಪೊಲೀಸರು ಭೇಟಿ ನೀಡಿ, ಆತನ ರೂಮ್ಗೆ ಬೀಗ ಹಾಕಿ ಸೀಜ಼್ ಮಾಡಿದ್ದಾರೆ. ಮನೋರಂಜನ್ ಕುಟುಂಬಸ್ಥರಿಂದ ಈಗಾಗಲೇ ಒಂದಷ್ಟು ಮಾಹಿತಿ ಸಂಗ್ರಹಿಸಿರುವ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತೆ ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಸದ್ಯ ಮನೋರಂಜನ್ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಪಡೆದುಕೊಂಡಿರುವ ಅಧಿಕಾರಿಗಳು, ಇದೀಗ ಆತನ ಬ್ಯಾಂಕ್ ಟ್ರಾನ್ಸಾಕ್ಷನ್ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದ್ಧಾರೆ. ಆತ ಖರ್ಚೆ ಮಾಡುತ್ತಿರಲಿಲ್ಲ ಎಂದು ತಂದೆ ದೇವರಾಜೇಗೌಡ ಹೇಳಿದ್ದು, ಮಗ ಯಾವುದೇ ಕೆಲಸವನ್ನೂ ಮಾಡುತ್ತಿರಲಿಲ್ಲ, ಬೆಂಗಳೂರು, ದೆಹಲಿ ಮೈಸೂರಿಗೆ ಓಡಾಡುತ್ತಿದ್ದ ಎಂಬ ಮಾಹಿತಿ ನೀಡಿದ್ದಾರೆ. ಈ ಕುರಿತು ಇದಕ್ಕೆಲ್ಲ ಹಣ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆಯೂ ಅಧಿಕಾರಿಗಳು ತನಿಖೆ ಶುರುಮಾಡಿದ್ಧಾರೆ.