ಪ್ರತಿನಿಧಿ ವರದಿ ಹನೂರು
ಗ್ರಾಮದಲ್ಲಿ ಕುಡಿಯುವ ನೀರಿಗೂ ಸಹ ಅಲೆದಾಟ ಶುರುವಾಗಿದ್ದು, ಅಧಿಕಾರಿಗಳು ಇತ್ತ ಗಮನಹರಿಸಲೇ ಇಲ್ಲ ಎಂದು ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಇಂಡಿಗನತ್ತ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲೂಕಿನ ಕುಗ್ರಾಮ ಗಡಿಯಂಚಿನ ಗ್ರಾಮ ಇಂಡಿಗನತ್ತ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸಹ ಅಲೆದಾಟ ಶುರುವಾಗಿದ್ದು ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕುಡಿಯುವ ನೀರಿಗಾಗಿ ಅಲೆದಾಟ : ಗ್ರಾಮದಲ್ಲಿರುವ ತೆರೆದ ಬಾವಿಗೆ ಊರಿನ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಅವಲಂಬನೆ ಮಾಡಿದ್ದಾರೆ ಸದ್ಯದ ಮಟ್ಟಕ್ಕೆ ಇರುವ ಬಾವಿಯಲ್ಲಿ ಸಹ ನೀರು ತಳಮಟ್ಟ ತಲುಪಿದ್ದು ಕುಡಿಯುವ ನೀರಿಗಾಗಿ ಪರದಾಟ ಶುರುವಾಗಿದೆ ಕುಡಿಯುವ ನೀರಿಗಾಗಿ ಕೆಲಸ ಕಾರ್ಯ ಬಿಟ್ಟು ದಿನಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಜನರು ಜತೆಗೆ ಜಾನುವಾರಿಗೂ ಸಹ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ಬಾವಿ ನೀರೇ ಗತಿ : ಗ್ರಾಮದಲ್ಲಿ ಜನರು ಹಾಗೂ ಜಾನುವಾರುಗಳಿಗೆ ಎಲ್ಲರಿಗೂ ಒಂದೇ ನೀರು ಜನರು ಕುಡಿಯಲು ಸ್ನಾನ ಮಾಡಲು ಬಟ್ಟೆ ತೊಳೆಯಲು ಹಾಗೂ ಇನ್ನಿತರ ಬಳಕೆ ಮಾಡುತ್ತಿದ್ದಾರೆ ಜತೆಗೆ ಜಾನುವಾರುಗಳು ಕುಡಿಯಲು ಸಹ ಇದೆ ನೀರನ್ನೇ ಬಳಸಬೇಕಿದೆ ಹಾಗಾಗಿ ಈ ಬಾರಿ ತುಂಬಾ ಕಷ್ಟವಾಗುತ್ತಿದೆ ಎಂದು ಗ್ರಾಮದ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಂತರ್ಜಲ ಮಟ್ಟ ಕುಸಿತ : ಬಿರು ಬೇಸಿಗೆಯಲ್ಲಿ ಬಿಸಿಲ ಬೇಗೆಗೆ ಇಡೀ ಭೂ ಮಂಡಲವೆ ತಲ್ಲಣಗೊಂಡಿದ್ದು ಅದರಂತೆ ಇಂಡಿಗನತ್ತ ಗ್ರಾಮದಲ್ಲೂ ಸಹ ಬಾವಿ ನೀರೆಲ್ಲ ತಳ ಮಟ್ಟ ತಲುಪಿದ್ದು ಕುಡಿಯುವ ನೀರಿಲ್ಲದೆ ಪರದಾಟ ಶುರುವಾಗಿದೆ ಅಲ್ಲದೇ ಮುಖ್ಯವಾಗಿ ಜನ ಜಾನುವಾರುಗಳಿಗೂ ಸಹ ಸಂಕಟವಾಗಿದೆ.
ರಸ್ತೆ ವಿದ್ಯುತ್ ಕೊಡಿ : ಈ ಹಿಂದೆ ಕಳೆದ ವಾರದಲ್ಲಿ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು ಆ ವೇಳೆ ಭರವಸೆಯನ್ನು ನೀಡಿದ್ದರು ಅದರಂತೆ ಆದಷ್ಟು ಬೇಗ ಕಾರ್ಯಗತವಾಗಬೇಕು ಜೊತೆಗೆ ನಮಗೆ ಕಚ್ಚಾ ರಸ್ತೆಯಾದರು ಜೊತೆಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಡಲು ಮುಂದಾಗಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ : ನಮ್ಮ ಇಂಡಿಗನತ್ತ ಗ್ರಾಮ ಕುಗ್ರಾಮವಾಗಿದ್ದು ಸರಿಯಾಗಿ ರಸ್ತೆಯಿಲ್ಲ, ಕುಡಿಯುವ ನೀರಿಲ್ಲ, ವಿದ್ಯುತ್ ವ್ಯವಸ್ಥೆ ಇಲ್ಲ ಹಾಗಾಗಿ ಈ ಹಿಂದೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದ್ದೇವು ಅಂತಹ ಸಂದರ್ಭದಲ್ಲಿ ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಜನರ ಮನವೊಲಿಸಿ ಸೌಲಭ್ಯ ನೀಡುತ್ತೇವೆ ಎಂದಿದ್ದರೂ ಆದರೂ ಸದ್ಯ ಇನ್ನು ಯಾವುದು ಕಾರ್ಯರೂಪಕ್ಕೆ ಬಂದಿಲ್ಲ ಜತೆಗೆ ಸದ್ಯದ ಪರಿಸ್ಥಿತಿ ತುಂಬಾ ಕಷ್ಟವಾಗಿದ್ದು ಗ್ರಾಮಸ್ಥರೆಲ್ಲರೂ ಸೇರಿ ನಿರ್ಧಾರ ಮಾಡಿದ್ದೂ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ನಿರ್ಧಾರ ಮಾಡಿದ್ದಾರೆ.
ಭರವಸೆ ಈಡೇರಿಲ್ಲ : ಈ ಹಿಂದೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದ ಹಿನ್ನೆಲೆ ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು ಆ ಸಂದರ್ಭದಲ್ಲಿ ಗ್ರಾಮಕ್ಕೆ ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆ ಆದಷ್ಟು ಬೇಗ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು ಆದರೇ ಇದುವರೆಗೂ ಸಹ ಅದರ ಬಗ್ಗೆ ಸುಳಿವೇ ಸಿಕ್ಕಿಲ್ಲ ಜೊತೆಗೆ ಗ್ರಾಮಕ್ಕೆ ಎಲ್ಲ ಅಧಿಕಾರಿಗಳು ಭೇಟಿ ನೀಡಿ ಭರವಸೆ ಅಷ್ಟೇ ನೀಡುತ್ತಿದ್ದಾರೆ ಕಾರ್ಯರೂಪಕ್ಕೆ ತುರುತ್ತಿಲ್ಲ ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದೆ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬೆ ಪುಟ್ಟ ತಂಬಡಿ,ಪುಟ್ಟ ತಂಬಡಿ, ಮಾದೇವಪ್ಪ, ರವಿ, ಚಂದ್ರ ಶೇಖರ್, ಶಿಲ್ಪಾ, ದುಂಡಮ್ಮ, ಮಹೇಶ್ವರಿ, ರೂಪ ಸೇರಿದಂತೆ ಇನ್ನಿತರರು ಇದ್ದರು.
ಇಂಡಿಗನತ್ತ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಹಾಗಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ತಿಳಿಸಲಾಗಿದೆ.
ಉಮೇಶ್
ಕಾರ್ಯ ನಿರ್ವಾಹಣ ಅಧಿಕಾರಿಗಳು ತಾಪಂ ಹನೂರು
ಚಿತ್ರ : ಇಂಡಿಗನತ್ತ ಗ್ರಾಮಸ್ಥರು ಒಟ್ಟಾಗಿ ಮತದಾನ ಬಹಿಷ್ಕಾರ ಮಾಡಿರುವುದು.
ಚಿತ್ರ : ಇಂಡಿಗನತ್ತ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ತೆರೆದ ಬಾವಿ ಬಳಿ ಅಲೆದಾಡುತ್ತಿರುವುದು.