ತುಮಕೂರು : ಭಾರತದಲ್ಲಿ ಹೊರಗಿನಿಂದ ಪ್ರಜಾ ಪ್ರಭುತ್ವ ಸುಂದರವಾಗಿ ಕಂಡರೂ ಕಳೆದ ಹತ್ತು ವರ್ಷಗಳಿಂದ ಅದನ್ನುಒಳಗಿಂದಲೆ ಗೆದ್ದಲು ಹಿಡಿಸಲು ಅಳುವ ಸರ್ಕಾರ ಯತ್ನಿಸುತ್ತಲೆ ಇದೆ, ಈ ಪ್ರಯತ್ನಗಳಿಗೆ ದುಡಿವ ಜನರು ಅವಕಾಶ ನೀಡದೆ ಸೋಲಿಸಬೇಕು ಎಂದು ಚಿಂತಕ ಮತ್ತು ಸಾಹಿತಿ ಡಾ; ಜಿ.ವಿ . ಅನಂದ ಮೂರ್ತಿ ಅವರು ಅಭಿಪ್ರಾಯ ಪಟ್ಟರು.
ಸಿಐಟಿಯು ನಿಂದ ಅಯೋಜಿಸಿದ್ದ 138ನೇ ಮೇ ದಿನಾಚರಣೆಯ ಅಂಗವಾಗಿ ನಗರದ ಟೌನ್ ಹಾಲ್ ಮುಂಭಾಗದಲ್ಲಿ ಬಹಿರಂಗ ಸಭೆಯಲ್ಲಿ ವಿಶ್ವಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಿತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ ನೆರೆ ಪಾಕಿಸ್ಥಾನಮತ್ತು ಬಾಂಗ್ಲ ದೇಶಕ್ಕೀಂತ ಕೆಟ್ಟ ಸ್ಥಿತಿಯಲ್ಲಿದೆ. ಸಾರ್ವಜನಿಕ ಪ್ರತಿಭಟನೆಯ ಕಾರಣಕ್ಕೆ ಅತಿಹೆಚ್ಚು ಇಂಟರ್ ನೇಟ್ ಅನ್ನು ನಿರ್ಬಂಧಿಸಿದ ದೇಶ ಭಾರತ ವಾಗಿದೆ ಎಂದರು, ದುಡಿವ ಜನರು ಮತ ಯಾರಿಗೆ ಹಾಕಬೇಕು ಎಂದು ತಿಳಿದರೆ ಅಷ್ಡೆ ಸಾಲದು, ರಾಜಕಿಯಾ ಅರಿವು ಪಡೆಯಬೇಕು ಎಂದರು ,ಬಸವ ತತ್ಬ, ಕುವೆಂಪು ಅವರ ವೈಚಾರಿಕತೆ, ಸಂತರು , ತತ್ವಪದಕಾರರ ತತ್ವದ ಅಧಾರದಲ್ಲಿ ಸಮಾಜವನ್ನು ಮುಂದೆ ಕೊಂಡು ಹೋಗುವ, ಯಾರಿಗೆ ಅನ್ಯಾಯ ಅದರು ಹಕ್ಕು ಕೇಳುವ ಐಕ್ಯತೆಯಿಂದ ಮುಂದೆ ಸಾಗುವುದು ಇಂದಿನ ಅಗತ್ಯ ಎಂದರು
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರೊ.ಕೆ.ದೊರೈರಾಜು, ವಿಶ್ವದ ಕಾರ್ಮಿಕರ ಒಂದಾಗಿ ಎಂಬುದೆ ಒಂದು ರಾಜಕಿಯಾ ಅರಿವು , ಜಾತಿ , ಧರ್ಮಗಳನ್ನು ಮಿರಿದಂತೆ ಮಾನವಿಯ ನೆಲೆಯಲ್ಲಿ ಅಲೋಚಿಸುವ- ನಡೆವ ದಿನವೆ ದುಡಿವ ಜನರಿಗೆ ವಿಮೋಚೆ ಸಿಗುತ್ತದೆ ಎಂದರು. ನಮ್ಮ ಸಂವಿಧಾನ ಕಲ್ಯಾಣ ರಾಜ್ಯದ ಪರಿ ಕಲ್ಪನೆಯದ್ದು, ಅದರಲ್ಲಿ ಬೇದ – ಬಾವ ಇಲ್ಲ,ಅದರೆ ರಾಜಕಿಯಾ ಪಕ್ಷಗಳು ಪ್ರಮಾಣ ಕವಾಗಿಲ್ಲ , ಮನುಷ್ಯ ಸತ್ತರೆ ಅವರ ಜಾತಿ, ಧರ್ಮ ನೋಡಿ – ತಮ್ಮ ರಾಜಕಿಯಾ ಲಾಭವನ್ನುಅಧಾರಿಸಿ ಪ್ರತಿಭಟಿಸು ಮಟ್ಟಕ್ಕೆ ಇಳಿದಿವೆ ಎಂದು ಅತಂಕ ವ್ಯಕ್ತಪಡಿಸಿದರು
ಅಂಗನವಾಡಿ ನೌಕರರ ಸಂಘದ ಗುಲ್ಜಾರ್ ಬಾನು, ಕಟ್ಟಕಾರ್ಮಿಕರ ಸಂಘ ಬಿ.ಉಮೇಶ್, ಸಿಐಟಿಯು ಜಿ. ಕಮಲ , ಖಜಾಂಚಿ . ಎ. ಲೋಕೇಶ್ , ಎನ್.ಕೆ ಸುಬ್ರಮಣ್ಯ, ಪೌರ ಕಾರ್ಮಿಕರ ಸಂಘದ ಮಂಜಣ್ಣ, ಕರ್ನಾಟಕ ಮುನಿಸಿಪಲ್ ಕಾರ್ಮಿಕರ ಸಂಘದ ಪ್ರಕಾಶ್,ಅಸ್ವತ್ರೆ ಕಾರ್ಮಿಕರ ಸಂಘ ರಂಗಮ್ಮ, ಬಿಸಿಊಟ ಕಾರ್ಮಿಕರ ಸಂಘದ ನಾಗರತ್ನ , ಹಮಾಲಿ ಕಾರ್ಮಿಕ ಸಂಘ ನಾಗರಾಜು, ಜಿಲ್ಲಾ ಬೋಧಕೇತರ ನೌಕರರ ಸಂಘ ದೋಡ್ಡ ರಾಮೇ ಗೌಡ ಇವರು ಮಾತನಾಡಿದರು
ಸಭೆಯ ಅಧ್ಯಕ್ಷತೆಯನ್ನು ಸೈಯದ್ ಮುಜೀಬ್ ವಹಿಸಿ ಮಾತನಾಡಿದರು. ಕಲೀಲ್ , ಷಣ್ಮಖಪ್ಪ , ಗ್ರಾಪಂ ನೌಕರ ಸಂಘ ಹೆಚ್, ಡಿ ನಾಗೇಶ್, ಪೀಟ್ ವೆಲ್ ಕಾರ್ಮಿಕರ ಸಂಘದ ಸುಜಿತ್ ನಾಯಕ್, ಜೆಮ್ ಪ್ರಾರ್ಪಟಿಸ್ ರಂಗಧಾಮಯ್ಯ, ಶಿವಕುಮಾರ್ ಸ್ವಾಮಿ, ಸಿಕೊಮಾ ಕಾರ್ಮಿಕರ ಸಂಘ ಗಣೇಶ್, ಕಸದ ಅಟೋ ಚಾಲಕರು ಮತ್ತು ಸಹಾಯಕರ ಸಂಘದ ಮಂಜುನಾಥ, ಮನೆ ಕೆಲಸಗಾರರ ಸಂಘದ ಪಲ್ಲವಿ, ಜನವಾದಿ ಮಹಿಳಾ ಸಂಘಟನೆ ಟಿ.ಕೆ ಕಲ್ಪನಾ, ಜಿಲ್ಲಾ ಪುಟ್ ಪಾತ್ ವ್ಯಾಪಾರಿಗಳ ಸಂಘದ ಜಗದೀಶ್, ಮತ್ತಿತರು ಇದ್ದರು.