ಪ್ರತಿನಿಧಿ ವರದಿ ಹುಣಸೂರು
ಸಾವಿರ ವರ್ಷಗಳ ಆಕ್ರಮಣದ ನಂತರವೂ ತನ್ನದೇ ದೇಶವಾಗಿ ಅಸ್ತಿತ್ವದಲ್ಲಿ ಉಳಿದುಕೊಂಡಿರುವ ದೇಶವೆಂದರೆ ಅದು ನಮ್ಮ ದೇಶ ಭಾರತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಮುಖ್ ಸುಧಾಕರ್ ಹೊಳ್ಳಿ ಅಭಿಪ್ರಾಯಪಟ್ಟರು.
ತಾಲೂಕು ಹಿಂದೂ ಜಾಗರಣವೇದಿಕೆ ವತಿಯಿಂದ ಬುಧವಾರ ಸಂಜೆ ನಗರದಲ್ಲಿ ಭಾರತ ಸಂಕಲ್ಪ ದಿನದ ಅಂಗವಾಗಿ ಆಯೋಜಿಸಿದ್ದ ಬೃಹತ್ ಪಂಜಿನ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಭೂಮಿಯಲ್ಲಿ ಸುಧರ್ಮದ ವಾರಸುದಾರರು ಯಾರಾದರೂ ಇದ್ದರೆ ಅದು ಹಿಂದೂ ಮಾತ್ರ. ನಮ್ಮದು ಕಾಲಾಪಾನಿಯಂತಹ ಶಿಕ್ಷೆಯನ್ನು ನಗುನಗುತ್ತಾ ಸ್ವೀಕರಿಸಿದಂತಹ ಸಾವರ್ಕರ್ ಅವರ ಸಂತತಿ. ಇಂದು ಜಗತ್ತಿನ ಯಾವ ದೇಶವೂ ಭಾರತವನ್ನು ಬಿಟ್ಟು ಮನವೊಲಿಕೆ ಮಾಡುವ ಸ್ಥಿತಿಯಲ್ಲಿಲ್ಲ. ಎರಡು ಬಲಾಡ್ಯ ರಾಷ್ಟ್ರದ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಶಾಂತಿ ಮನವರಿಕೆ ಮಾಡಲು ಭಾರತ ಬೇಕು ಎನ್ನುವ ಸ್ಥಿತಿಯಲ್ಲಿದೆ. ಇದು ಹಿಂದು ಶಕ್ತಿ. ಇದು ಭಾರತೀಯರ ಶಕ್ತಿ. ಇದು ಇಂದಿನ ಯುವಕರಿಗೆ ಮನವರಿಕೆಯಾಗಬೇಕು ಎಂದರು.
ನಗರಸಭಾ ಸದಸ್ಯ ವಿವೇಕಾನಂದ, ಆರ್.ಎಸ್.ಎಸ್. ಸಹ ಸಂಚಾಲಕ ಮಹದೇವ್ರಾವ್ ಭಾಗಲ್, ಜಿಲ್ಲಾ ಪ್ರಚಾರಕ ಬೀರೇಶ್, ವಿಶ್ವ ಹಿಂದೂ ಪರಿಷತ್ನ ವಿಶ್ವನಾಥ್, ಧರ್ಮ ಜಾಗರಣ ತಾಲೂಕು ಸಂಚಾಲಕ ಅಪ್ಪಣ್ಣಯ್ಯ, ವಿ.ಎನ್.ದಾಸ್ ಸೇರಿದಂತೆ ಅನೇಕರಿದ್ದರು.
೧೫ಊUಓ೩: ಹುಣಸೂರು ನಗರದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದು ಜಾಗರಣ ವೇದಿಕೆವತಿಯಿಂದ ನಡೆದ ಸಭೆಯಲ್ಲಿ ಪ್ರಾಂತ ಪ್ರಮುಖ್ ಸುಧಾಕರ್ಹೊಸಳ್ಳಿ ಮಾತನಾಡಿದರು. ಮುಖಂಡರಾದ ವಿವೇಕಾನಂದ, ಅಪ್ಪಣ್ಣ, ವಿ.ಎನ್.ದಾಸ್ ಇತರರಿದ್ದಾರೆ.