ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ
ಕೆ.ಎಂ.ದೊಡ್ಡಿ: ಕೆಲವೊಂದು ರಾಜಕೀಯ ವಿಚಾರವಾಗಿ ನನಗೆ ವೈಯುಕ್ತಿಕವಾಗಿ ನೋವುಂಟಾಗಿದ್ದು ಏನೇ ಎದುರಾದರು ಸರಿ ನನ್ನ ಬೆಂಬಲಿಗರನ್ನು ಕೈ ಬೀಡುವ ಪ್ರಶ್ನೆ ಇಲ್ಲ ಅವರ ಜತೆ ನಾನು ಸದಾ ಇರುತ್ತೆನೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
ಇಲ್ಲಿಗೆ ಸಮೀಪದ ಅಣ್ಣೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಒಬ್ಬ ಜನಪ್ರತಿನಿಧಿಯಾಗಿರುವ ನನಗೆ ಕೆಲವೊಂದು ವಿಷಯಗಳಲ್ಲಿ ಮತ್ತು ಕಾರ್ಯಕರ್ತರಿಗೆ ವೈಯಕ್ತಿವಾಗಿ ನೋವು ಆಗಲು ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜಿ.ಮಾದೇಗೌಡರ ಕಾಂಗ್ರೆಸ್ನನ್ನು ಸಂಘಟಿಸಲು ಆರಂಭಿಸಿದ್ದೇನೆ ಎಂದರು.
ನಾನು ಯಾರನ್ನು ಟೀಕೆ ಮಾಡುವ ಅವಶ್ಯಕತೆ ನನಗಿಲ್ಲ. ಕೆಲವೊಂದು ವಿಚಾರಗಳಿಂದ ಕಳೆದ ಒಂದು ವರ್ಷಗಳಿಂದ ಗ್ರಾಮಗಳಿಗೆ ಭೇಟಿ ಕೊಡುವುದನ್ನು ಕಡಿಮೆಗೊಳಿಸಿದ್ದೆ. ಅಭಿಮಾನಿಗಳ ಒತ್ತಾಯದಿಂದ ಮತ್ತೆ ಗ್ರಾಮಗಳಿಗೆ ಬೆಟಿ ನೀಡಿ ಕಾರ್ಯಕರ್ತರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಮತ್ತೊಮ್ಮೆ ಜಿ.ಮಾದೇಗೌಡ ಮತ್ತು ಮಧು ಜಿ.ಮಾದೇಗೌಡರ ಕಡೆಗೆ ಹೋಗೋಣ ಎಂದು ಸಂದೇಶ ನೀಡುತ್ತಿರುವುದು ಸಂತಸ ತಂದಿದೆ. ಕಳೆದ ೨೦ ವರ್ಷಗಳಿಂದಲೂ ನಾನು ರಾಜಕಾರಣ ಮಾಡುತ್ತಾ ಬಂದಿದ್ದು ಯಾರನ್ನು ದ್ವೇಷ ಮಾಡಿಲ್ಲ ಯಾರಿಗೂ ಸಹ ನೋವು ಮಾಡಿಲ್ಲ. ನನ್ನ ಕೈಲಾದ ಮಟ್ಟಿಗೆ ನೆರವಾಗಿದ್ದೆನೆ ಎಂದರು.
ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್ ಮಾತನಾಡಿ, ಅಣ್ಣೂರು ಗ್ರಾಮಕ್ಕೆ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಮತ್ತು ಮಧು ಜಿ.ಮಾದೇಗೌಡ ಕೊಡುಗೆ ಅಪಾರವಾಗಿದ್ದು ಗ್ರಾಮದ ಬಗ್ಗೆ ಅತೀವ ಪ್ರೀತಿ ಅವರಲ್ಲಿದ್ದು ಅವರ ಬೆಂಬಲಕ್ಕೆ ನಾವು ನಿಲ್ಲುತ್ತೆವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಬಿ.ಎಂ.ನಜೇಗೌಡ, ಮನ್ಸುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್, ರೈತ ಸಂಘದ ಜಿಲ್ಲಾಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಸೊಸೈಟಿ ಮಾಜಿ ಅಧ್ಯಕ್ಷ ಆರ್.ಸಿದ್ದಪ್ಪ, ನಿರ್ದೇಶಕ ಸುನೀಲ್, ಮಾಜಿ ನಿರ್ದೇಶಕ ಜಿ.ರವಿ, ಗ್ರಾ.ಪಂ ಮಾಜಿ ಅಧ್ಯಕ್ಷ ಜಯರಾಮು, ಸದಸ್ಯ ನಾಗರಾಜು, ಮುಖಂಡರಾದ ಪಾಪಣ್ಣ, ಶಿವಣ್ಣ, ಸೇರಿದಂತೆ ಹಲವರಿದ್ದರು.
—————–
೨೧ಏಒಆ-೧ ಅಣ್ಣೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಭಿನಂದನೆ ಸ್ವೀಕರಿಸಿದರು.
—————