ಪ್ರತಿನಿಧಿ ವರದಿ, ಕೃಷ್ಣರಾಜಪೇಟೆ
ಬೆಂಗಳೂರು ಬಸವನಗುಡಿ ದೊಡ್ಡ ಗಣಪತಿ ದೇವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀಹರ್ಷದೀಕ್ಷಿತ್ ಮತ್ತು ಕುಟುಂಬ ವರ್ಗದವರು ಇಂದು ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಭೂವರಹನಾಥ ದೇವಾಲಯ, ಪವಿತ್ರ ತ್ರಿವೇಣಿ ಸಂಗಮ ಹಾಗೂ ಹೊಸಹೊಳಲು ಶ್ರೀಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯವನ್ನು ವೀಕ್ಷಿಸಿ ಪುಳಕಿತರಾದರು.
ಭೂವೈಕುಂಠ ಎಂದೇ ಪ್ರಸಿದ್ಧವಾಗಿರುವ ಕಲ್ಲಹಳ್ಳಿಯಲ್ಲಿರುವ ಭೂವರಾಹ ದೇವಾಲಯದಲ್ಲಿ ಭೂದೇವಿಸಮೇತ ಶ್ರೀಲಕ್ಷ್ಮೀವರಹನಾಥ ದೇವರ ೧೭ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯ ಏಕಶಿಲಾಮೂರ್ತಿಯ ಸೌಂದರ್ಯವನ್ನು ಕಣ್ತುಂಬಿಕೊAಡರು.
ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ಮೂರು ಜೀವಂತ ನದಿಗಳು ಒಂದಾಗಿ ಸೇರುವ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ಪವಾಡ ಪುರುಷರಾದ ಬಾಲಕ ಮಹದೇಶ್ವರರ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಿ ಲೋಕ ಕಲ್ಯಾಣರ್ಥವಾಗಿ ಪ್ರಾರ್ಥಿಸಿದರು.
ಹೊಯ್ಸಳ ಶಿಲ್ಪಕಲೆಯ ಅಪೂರ್ವ ತಾಣವಾದ ಹೊಸಹೊಳಲಿನ ಶ್ರೀಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯದ ಸೌಂದರ್ಯವನ್ನು ಕಂಡು ಸಂತೋಷಗೊAಡರು. ಬೇಲೂರು ದೇವಾಲಯವನ್ನು ಒಳಗೆ ನೋಡಬೇಕು ಹಳೇಬೀಡು ದೇವಾಲಯವನ್ನು ಹೊರಗೆ ನೋಡಬೇಕೆಂಬ ಮಾತಿದೆ ಆದರೆ ಹೊಸಹೊಳಲಿನ ಶ್ರೀಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯದ ಶಿಲ್ಪ ಕಳೆಯ ಕೆತ್ತನೆಗಳು, ಹಾಠಗೂ ಚಿತ್ರಪಟ್ಟಿಕೆಗಳು ದೇವಾಲಯದ ಒಳಗೆ ಹಾಗೂ ಹೊರಗೆ ನಯನ ಮನೋಹರವಾಗಿವೆ. ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವರ ಗರ್ಭಗುಡಿಯ ಮುಂದಿನ ನವರಂಗದ ಕಂಬದಲ್ಲಿ ಕೆತ್ತಿರುವ ಹೆಬ್ಬರೆಳು ಗಾತ್ರದ ಆಂಜನೇಯನು ಎಳನೀರು ಕುಡಿಯುತ್ತಿರುವ ಶಿಲ್ಪವು ದೇವಾಲಯದ ಸೌಂದರ್ಯಕ್ಕೆ ಸಾಕ್ಷಿಯಾಗಿರುವುದನ್ನು ಕಂಡು ಶ್ರೀಹರ್ಷದೀಕ್ಷಿತ್ ರೋಮಾಂಚನಗೊAಡರು.
ಹೊಯ್ಸಳ ಶಿಲ್ಪಕಲೆಯ ಸೌಂದರ್ಯಕ್ಕೆ ಸಾಕ್ಷಿಯಾಗಿರುವ ಹಲವಾರು ದೇವಾಲಯಗಳನ್ನು ಹೊಂದಿರುವ ಕೆ.ಆರ್.ಪೇಟೆ ತಾಲ್ಲೂಕಿನ ಜನರ ಹೃದಯ ಶ್ರೀಮಂತಿಕೆಯು ದೊಡ್ಡದು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ದೇವಾಲಯಗಳ ಸಂರಕ್ಷಣೆಯು ನಮ್ಮ ಆಧ್ಯ ಕರ್ತವ್ಯವಾಗಬೇಕು. ಶರಣ ಶ್ರದ್ಧಾ ಕೇಂದ್ರಗಳಾಗಿರುವ ದೇವಾಲಯ ಗಳನ್ನು ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡಬೇಕು ಎಂದು ಶ್ರೀಹರ್ಷಧೀಕ್ಷಿತ್ ಹೇಳಿದರು.
ಈ ಸಂಧರ್ಭದಲ್ಲಿ ಸಾಂಸ್ಕೃತಿಕ ಸಂಘಟಕ ವೇದಬ್ರಹ್ಮ ಶ್ರೀನಿವಾಸ ರಾಘವನ್, ವಿಶ್ರಾಂತ ಶಿಕ್ಷಕ ಡಾ.ಅಂಚಿ ಸಣ್ಣ ಸ್ವಾಮಿಗೌಡ, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಆರ್. ಲೋಕೇಶ್, ನಂದಕುಮಾರ್, ಬೇಕರಿ ಶೇಖರ್, ಹೆಚ್.ವಿ.ಶ್ರೀನಿವಾಸಮೂರ್ತಿ, ಶಂಕರೇಗೌಡ, ನಂದಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ: ೦೪ ಕೆ.ಆರ್.ಪೇಟೆ ೦೨ ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಭೂವರಹನಾಥ ದೇವಾಲಯ, ಪವಿತ್ರ ತ್ರಿವೇಣಿ ಸಂಗಮ ಹಾಗೂ ಹೊಸಹೊಳಲು ಶ್ರೀಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯವನ್ನು ಬೆಂಗಳೂರು ಬಸವನಗುಡಿ ದೊಡ್ಡ ಗಣಪತಿ ದೇವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀಹರ್ಷದೀಕ್ಷಿತ್ ಮತ್ತು ಕುಟುಂಬ ವರ್ಗದವರು ಇಂದು ವೀಕ್ಷಿಸಿ ಪುಳಕಿತರಾದರು.