ರಾಜ್ಯ ಸರ್ಕಾರದ ವಿರುದ್ಧ ಮೈಸೂರು ಚಲೋ ಪಾದಯಾತ್ರೆ ಮೂಲಕ ಹೋರಾಟ ನಡೆಸಲು ಬೀದಿಗಿಳಿದಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಸಿಎಂ ತವರಿನಲ್ಲಿ ನಡೆಸಲಾದ ಜನಾಂದೋಲನ ಸಮಾವೇಶದಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಂಡ ಕೈ ನಾಯಕರು, ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಾವೇಶದಲ್ಲಿ ಮಾತನಾಡುತ್ತಿರುವ ಪ್ರತಿಯೊಬ್ಬ ಸಚಿವರುಗಳು, ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ನಿಟ್ಟಿನಲ್ಲಿ ಪಾದಯಾತ್ರೆ ಮೂಲಕ ಹೋರಾಟ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರ ವಿರುದ್ಧ ಕಿಡಿಕಾರುತ್ತಿದ್ದಾರೆ.
ಸಮಾವೇಶವನ್ನ ದೀಪ ಬೆಳಗಿಸಿ, ಕಹಳೆ ಊದುವ ಮೂಲಕ ಉದ್ಘಾಟನೆ ಮಾಡಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿ ನಾವೆಲ್ಲರೂ ಇದ್ದೇವೆಂದು ಶಾಸಕರು ಮತ್ತು ನೆರೆದಿದ್ದ ಬಂಬಲಿಗರು ಒಕ್ಕೊರಲಿನಿಂದ ಕೈ ಎತ್ತುವ ಮೂಲಕ ಶಕ್ತಿ ಪ್ರದರ್ಶನವನ್ನ ಸಮಾವೇಶದಲ್ಲಿ ಕಾಂಗ್ರೆಸ್ಸಿಗರು ತೋರಿದ್ದಾರೆ.
ಸಮಾವೇಶದಲ್ಲಿ ಯಾರು ಗಲಾಟೆ ಮಾಡ್ದೆ ಕೇಳಿ, ಕೈ ಮುಗಿತಿನಿ ಸ್ವಲ್ವ ತಾಳ್ಮೆ ಇಂದ ಇರ್ರೋ ಎಂದು ಮಾತನ್ನು ಶುರುಮಾಡಿದ ಡಿಸಿಎಂ ಡಿಕೆ ಶಿವಕುಮಾರ್
ಅಂದು ಬ್ರಿಟಿಷರ ವಿರುದ್ಧ ನಾವು ಹೋರಾಟ ಮಾಡಿದ ನಾವು ಇದೇ 9 ನೇ ತಾರೀಖಿನಂದು ಬಳ್ಳಾರಿ ಪಾದಯಾತ್ರೆ ಮಾಡಿದ್ವಿ, ಕ್ವಿಟ್ ಇಂಡಿಯಾ ಮೂಮೆಂಟ್ ದಿನ ಬಳ್ಳಾರಿಯಲ್ಲಿ ಗಣಿ, ಕಳ್ಳರ ವಿರುದ್ಧ ಸಮಾವೇಶ ಮಾಡಿದ್ವು.ಇಂದು ಬಿಜೆಪಿ ಎನ್ ಡಿ ಎ ವಿರುದ್ಧ, ಬಡವರಿಗಾಗಿ, ಐದು ಗ್ಯಾರಂಟಿ ಉಳಿವಿಗಾಗಿ, ನಮ್ಮ ವಿರುದ್ಧ ಹೋರಾಟ ಮಾಡ್ತಾ ಇರೋರ ಹೋರಾಟ ನಿಲ್ಲಿಸೋಕೆ ಇಂದು ಹೋರಾಟ ಮಾಡ್ತಿದ್ದೇವೆ ಎಂದಿದ್ದಾರೆ.
ಜೆಡಿಎಸ್, ಬಿಜೆಪಿ ಪಾದಯಾತ್ರೆ, ಪಾದಯಾತ್ರೆ ಅಲ್ಲ, ಇದೊಂದು ಪಾಪ ವಿಮೋಚನ ಯಾತ್ರೆಯನ್ನ ಮಾಡ್ತಾ ಇದ್ದಾರೆ.ನಮ್ಮದು ಅಧರ್ಮಿಗಳ, ಅನ್ಯಾಯದ ವಿರುದ್ಧ ನ್ಯಾಯದ ಯುದ್ಧ, ಅಸತ್ಯತ ವಿರುದ್ಧ ನ್ಯಾಯ ಯುದ್ಧ ಮಾಡುತ್ತಿದ್ದೇವೆ.ಸಿದ್ದರಾಮಯ್ಯ ನಾಯಕತ್ವ, ಡಿಕೆಶಿ ಅಧ್ಯಕ್ಷತೆಯಲ್ಲಿ ಬಂದಿರೋ ಸರ್ಕಾರವನ್ನ ತೆಗೆಯಲು ಹುನ್ನಾರ ನಡೆಯುತ್ತಿದೆ. ಬಡವರಿಗೆ ಗ್ಯಾರಂಟಿ ಕೊಟ್ಟು, ಬಡವರ ರಕ್ಷಣೆಗಾಗಿ ನಾವು ಹೋರಾಟ ಮಾಡ್ತಿದ್ದೇವೆ ಎಂದರು.
ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಅಶೋಕ, ಮಿಸ್ಟರ್ ವಿಜಯೇಂದ್ರ ಹತ್ತು ತಿಂಗಳಲ್ಲ,ಹತ್ತು ವರ್ಷ ಆದ್ರೂ ಈ ಸರ್ಕಾರ ಮುಟ್ಟಲು ಸಾಧ್ಯವಿಲ್ಲ.ನಿಮ್ಮ ತಟ್ಟೆಯಲ್ಲಿ ಹೆಗ್ಗಣಗಳು ಬಿದ್ದಿವೆ, ನಿಮ್ಮವು 25 ಹಗರಣ ಕ್ಲೀನ್ ಸ್ವಾಮಿ ಕುಮಾರಸ್ವಾಮಿ ಅಂತೆ .., ವಿಜಯೇಂದ್ರ ನಿಮ್ಮಪ್ಪ ಎರಡುಬಾರಿ ರಾಜೀನಾಮೆ ಕೊಟ್ರು ಯಾಕೆ? ಲಕ್ಷ್ಮೀ ವಿಲಾಸ್ ಬ್ಯಾಂಕ್ ಗೆ ಹಣ ಟ್ರಾನ್ಫರ್ ಮಾಡ್ದಲ್ಲ, ಮೊದಲು ಉತ್ತರ ಕೊಡು… ಈ ‘ಬಂಡೆ’ ಯಾವಾಗ್ಲೂ ಸಿದ್ದರಾಮಯ್ಯ ಜೊತೆ ಇರುತ್ತೆ, 10 ವರ್ಷವಾದ್ರೂ ಸರ್ಕಾರ ಮುಟ್ಟೋಕೆ ಬಿಡಲ್ಲ ಎಂದು ವಿಪಕ್ಷಗಳ ವಿರುದ್ಧ ಗುಡುಗಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್.