ಮೈಸೂರು: ಮರಿಗಳು, ಪುಟ್ಟ ಪುಟ್ಟ ಜೀವಿಗಳು ಸಾಧು ಪ್ರಾಣಿಗಳ ಸಂತಾನಗಿರಲಿ ಅಥವಾ ಹಿಂಸ್ರ ಪಶುಗಳು- ನೋಡಲು ಮುದ್ದಾಗಿಯೇ ಕಾಣುತ್ತವೆ. ಅಂದಹಾಗೆ, ಮರಿಗಳು ಮೈಸೂರು ತಾಲ್ಲೂಕಿನ ಆಯರಹಳ್ಳಿ ಗ್ರಾಮದ ರೈತ ದ್ಯಾವಣ್ಣ ಎನ್ನುವವರ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿವೆ. ಕಬ್ಬು ಕಟಾವು ಮಾಡುತ್ತಿದ್ದಾಗ ಮರಿಗಳು ಕಂಡವೆಂದು ದ್ಯಾವಣ್ಣ ಹೇಳಿದ್ದಾರೆ. ಚಿರತೆಗಳ ಬಗ್ಗೆ ಅವರು ಅರಣ್ಯ ಇಲಾಣೆಯ ಅಧಿಕಾರಿಗಳ ತಿಳಿಸಿದಾಕ್ಷಣ ಅವರು ಸ್ಥಳಕ್ಕೆ ಬಂದು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಇದು ಕತೆಯ ಒಂಧು ಭಾಗ ಮಾತ್ರ ಆಯಿತು. ಮರಿಗಳಿಗೆ ಹಾಲುಣಿಸಲು ತಾಯಿ ಚಿರತೆ ಅವುಗಳಿಗೆ ಜನ್ಮ ನೀಡಿದ ಸ್ಥಳಕ್ಕೆ ಬಂದೇ ಬರತ್ತದೆ. ಅವು ಕಾಣದೆ ಹೋದಾಗ ಗಾಬರಿಗೊಳ್ಳುತ್ತದೆ ಮತ್ತು ತೀವ್ರ ಸ್ವರೂಪದ ಆಕ್ರಮಣಕಾರಿ ಪ್ರವೃತ್ತಿ ಪ್ರದರ್ಶಿಸಿದರೂ ಅಚ್ಚರಿಯಿಲ್ಲ. ಅದನ್ನು ಸೆರೆಹಿಡಿದು ಮರಿಗಳೊಂದಿಗೆ ಜೊತೆಗೂಡಿಸಿ ಕಾಡಿಗೆ ಬಿಡುವ ಉಪಾಯವನ್ನು ಅರಣ್ಯಾಧಿಕಾರಿಗಳು ರಚಿಸಿದ್ದಾರೆ.