ದೇವನಹಳ್ಳಿ: ದೇವನಹಳ್ಳಿ ಟೌನಿನ ಪಾರ್ಕ್ ರಸ್ತೆಯಲ್ಲಿರುವ ಪ್ರಸಿದ್ಧ ಸರ್ವಶಕ್ತ್ಯಾತ್ಮಕ ಶ್ರೀ ಚೌಡೇಶ್ವರಿ ದೇವಾಲದಯದಲ್ಲಿ ದೇವಾಲಯದ ಅಧ್ಯಕ್ಷ ಎಸ್ಎಲ್ಎನ್ ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ಹನ್ನೊಂದನೇ ವಾರ್ಷಿಕೋತ್ಸವದ ಹಿನ್ನಲೆ ಸುದ್ದಿಗೋಷ್ಠಿ ನಡೆಯಿತು.
ಶ್ರೀ ಸರ್ವಶಕ್ತ್ಯಾತ್ಮಕ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ದೇವಾಲಯದ ಅಧ್ಯಕ್ಷ ಎಸ್ಎಲ್ಎನ್ ಅಶ್ವತ್ಥ್ ನಾರಾಯಣ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ವಾರ್ಷಿಕೋತ್ಸವ ನಡೆದುಕೊಂಡು ಬರುತ್ತಿದೆ. ತಾಯಿ ಆಶೀರ್ವಾದ, ದೇವಿ ಕೃಪೆ ಪ್ರತಿ ಭಕ್ತರಿಗೆ ಅನುಕೂಲವಾಗಿದೆ. ೧೧ ವರ್ಷ ಹೇಗೆ ಕಳೆದಿದೆ ಎಂಬುವುದು ಆಶ್ಚರ್ಯವಾಗುತ್ತಿದೆ. ಬಹಳ ವಿಜೃಂಭಣೆಯಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಮೇ ೯ ರಂದು ಬೆಳಿಗ್ಗೆ ೭ ಗಂಟೆಯಿಂದ ದೇವಿಗೆ ಗಂಗಾಪೂಜೆ, ಮಹಾ ಸಂಕಲ್ಪ, ಮಹಾಭಿಷೇಕ, ಗಣಹೋಮ, ಕುಂಕುಮಾರ್ಚನೆ, ಚಂಡಿಕಾ ಪಾರಾಯಣ, ರಾತ್ರಿ ೮ ಗಂಟೆಗೆ ಮಹಾ ಮಂಗಳಾರತಿ, ಮೇ.೧೦ರಂದು ಅಮ್ಮನವರ ಪ್ರತಿಷ್ಠಾಪನಾ ದಿನ ಮತ್ತು ಅಕ್ಷಯ ತೃತೀಯ ಮಹಾದಿನ ಇರುವುದರಿಂದ ಹನ್ನೊಂದನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತೆ. ನವ ಚಂಡಿಕಾ ಹೋಮ, ಪಂಜುರ್ಲಿ ದೈವ ಅಲಂಕಾರ ನಂತರ ಅನ್ನಸಂತರ್ಪಣೆ, ಸತ್ಸಂಗ ಭಜನೆ, ಚಿನ್ನಲೇಪಿತ ಅಮ್ಮನವರ ಉತ್ಸವ ಮೂರ್ತಿ ಮೆರವಣಿಗೆ ಇರುತ್ತದೆ ಎಂದು ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಗಂಗಾದರ್ ತಿಳಿಸಿದರು.
ದೇವಾಲಯದ ಸದಸ್ಯ ಶ್ರೀರಾಮಯ್ಯ, ರಾಜಣ್ಣ, ಜಯರಾಮ್, ಹನುಮಂತಪ್ಪ ಇದ್ದರು.