ಚಿಕ್ಕಬಳ್ಳಾಪುರ: ತಾಲೂಕಿನ ಹಾರೋಬಂಡೆಯ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಜಿ. ಪ್ರಕೃತಿ ಧರ್ಮಪೀಠ ಪ್ರಕೃತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡದ್ದ ಯುಗಾದಿ ಪ್ರಶಸ್ತಿ ಪುರಸ್ಕಾರ 2024 ಕಾರ್ಯಕ್ರಮದಲ್ಲಿ ಹಲವು ಗಣ್ಯರಿಗೆ ನಿವೃತ್ತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿದರು.
ಸಮಾಜ ಸೇವಕರಾದ ಜೈ ಫೌಂಡೇಶನ್ ಸಂಸ್ಥೆಯ ಜಯ ಕುಮಾರ್, ಶಿಕ್ಷಣ ಪ್ರೇಮಿ ಡಾ.ಎಂ.ವಿ.ಸದಾಶಿವ ಮಂಚನಬಲೆ, ನಂದಿ ಬಾಷಾ, ಪುರೋಷತ್ತಮ್, ರಾಜಶೇಖರ್, ಹಾಶಿಂ ಬನ್ನೂರು, ನಾರಾಯಣ್, ಅವರಿಗೆ ಯುಗಾದಿ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಡಾ.ಎಂ.ವಿ.ಸದಾಶಿವ ಮಾತನಾಡಿ, ನಾವು ಮಾಡಿರುವ ಸಾಮಾಜಿಕ ಸೇವೆಗಳನ್ನು ಗುರುತಿಸಿ ಶ್ರೀ ಜಿ.ಪ್ರಕೃತಿ ಧರ್ಮಪೀಠ ಟ್ರಸ್ಟ್ ವತಿಯಿಂದ ಯುಗಾದಿ ಪ್ರಶಸ್ತಿ ಪ್ರದಾನ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ಇದು ಸಮಾಜ ಸೇವೆ ಮಾಡಲು ಇನ್ನಷ್ಟು ಜನರಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಜಾಲಪ್ಪ ಮೆಡಿಕಲ್ ಕಾಲೇಜ್ ಕಾರ್ಯದರ್ಶಿ ಜಿ.ಎಚ್.ಎನ್ ನಾಗರಾಜ್, ಜಾಲಪ್ಪ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಜಿ.ಎಚ್.ಎನ್ ನಾಗರಾಜ್, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಜಿ.ಪ್ರಕೃತಿ ಧರ್ಮಪೀಠ ಟ್ರಸ್ಟ್ ಶ್ರೀನಿವಾಸ್ ಹಾಜರಿದ್ದರು.