ಪ್ರತಿನಿಧಿ ವರದಿ ಮಂಡ್ಯ
ಬಡವರ ಪರ ಧ್ವನಿಯಾಗಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರ ರಾಜಕೀಯ ಜೀವನ ಮತ್ತಷ್ಟು ಉಜ್ವಲವಾಗಲಿ ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿ ಕೆ.ಎಲ್.ಆನಂದ್ ಹೇಳಿದರು.
ನಗರದಲ್ಲಿರುವ ಶ್ರೀವಿದ್ಯಾಗಣಪತಿ ದೇವಾಲಯದಲ್ಲಿ ವಿ.ಸೋಮಣ್ಣ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ, ಜಿಲ್ಲಾಸ್ಪತ್ರೆಯ ಗರ್ಭಿಣಿ-ಬಾಣಂತಿ-ಅಗತ್ಯಯುಳ್ಳುವರಿಗೆ ಪೋಷ್ಠಿಕಾಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತ ಸರ್ಕಾರದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಯುವನಾಯಕ ಡಾ.ಅರುಣ್ ಸೋಮಣ್ಣ ಅವರ ಜನ್ಮದಿನ ಪ್ರಯುಕ್ತ ಆಯುಸ್ಸು, ಆರೋಗ್ಯ ಮತ್ತು ರಾಜಕೀಯ ಭವಿಷ್ಯ ವೃದ್ದಿಗಾಗಿ ಪೂಜೆ ನೇರವೆರಿಸಲಾಯಿತ್ತು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿವೇಕ್, ಗ್ರಾ.ಪಂ.ಸದಸ್ಯ ಪ್ರಸನ್ನ, ಮೂಡ ಮಾಜಿ ಸದಸ್ಯ ಹನುಮಂತು, ಮಲ್ಲೇಶ್ಮೂರ್ತಿ, ರಮೇಶ್ ವಿಶ್ವಕರ್ಮ, ಕೆಂಪಬೋರಯ್ಯ, ನಾಗನಂದ್, ಕೃಷ್ಣ, ಪ್ರಸನ್ನ, ಹೊಸಹಳ್ಳಿಶಿವು, ಚಂದ್ರ, ಶಿವಲಿಂಗು, ಮಮತೆಯ ಮಡಿಲು ಯೋಗೇಶ್ ಮತ್ತಿತರರಿದ್ದರು.
ಪೋಟೋ: ಮಂಡ್ಯ ನಗರದಲ್ಲಿರುವ ಶ್ರೀವಿದ್ಯಾಗಣಪತಿ ದೇವಾಲಯದಲ್ಲಿ ಭಾರತ ಸರ್ಕಾರದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಯುವನಾಯಕ ಡಾ.ಅರುಣ್ಸೋಮಣ್ಣ ಅವರ ಜನ್ಮದಿನ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.