ಸಿಬಿಐ ತನಿಖೆಗೆ ಬಿಜೆಪಿ ಮುಖಂಡ ಕೆ.ಎಂ.ಕೃಷ್ಣನಾಯಕ ಆಗ್ರಹ
ಪ್ರತಿನಿಧಿ ವರದಿ ಎಚ್.ಡಿ.ಕೋಟೆ
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಕಾರಣಕ್ಕಾಗಿ ರಾಜ್ಯದ ವಾಲ್ಮೀಕಿ ನಿಗಮದ ಹಣ ಬಳಕೆ ಮಾಡಿಕೊಂಡಿರುವ ಆರೋಪದಡಿ ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ರಾಜ್ಯ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಎಂ.ಕೃಷ್ಣನಾಯಕ ಆಕ್ರೋಶ ಹೊರಹಾಕಿದರು.
ಹಗರಣದ ಕುರಿತು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಲು ತೆರಳುವ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿ, ಜನತೆಗೆ ಗ್ಯಾರಂಟಿಗಳ ಆಮಿಷ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಅವುಗಳನ್ನು ಈಡೇರಿಸಲು ಬೊಕ್ಕಸದಲ್ಲಿ ಹಣವಿಲ್ಲದೇ ಮೊದಲಿಗೆ ದಲಿತರ ಉದ್ಧಾರಕ್ಕೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ.ಗಳನ್ನು ಬಳಸಿಕೊಂಡು ಮೋಸ ಮಾಡುವುದರೊಂದಿಗೆ, ವಾಲ್ಮೀಕಿ ನಿಗಮದ 187 ಕೋಟಿ ರೂ. ಗಳನ್ನು ತೆಲಂಗಾಣದ ಚುನಾವಣೆಗೆ ಬಳಸಿದ್ದಾರೆ ಎಂಬುದಕ್ಕೆ ತನಿಖೆ ವೇಳೆ ತೆಲಂಗಾಣದಲ್ಲಿ ಸಿಕ್ಕ ಹಣವೇ ನಿದರ್ಶನ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.
187 ಕೋಟಿ ಹಣವನ್ನು ಬಳಸುವ ಮೂಲಕ ಎಸ್.ಟಿ. ಜನಾಂಗಕ್ಕೆ ಮೋಸ ಮಾಡಿ, ಸಮುದಾಯದ ಸಚಿವರಿಂದ ರಾಜೀನಾಮೆ ಕೊಡಿಸಿ ಸುಮ್ಮನಾಗಿದ್ದಾರೆ. ಪ್ರಕರಣವನ್ನು ಹೊರಗೆ ತಂದು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಸಾವಿಗೆ ಸೂಕ್ತ ನ್ಯಾಯ ಸಿಗಬೇಕು. 187 ಕೋಟಿ ರೂ. ಹಗರಣದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಪ್ರಕರಣವನ್ನು ಈ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಆಗ್ರಹ ಮಾಡಲು ತಾಲೂಕಿನಿಂದ 3 ಸಾವಿರಕ್ಕೂ ಹೆಚ್ಚಿನ ಜನರೊಂದಿಗೆ ಧರಣಿ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಶಂಬೇಗೌಡ, ಮುಖಂಡರಾದ ಕೆ.ಪಿ.ಗುರುಸ್ವಾಮಿ, ವಿವೇಕಾನಂದ, ಅಂಕಪ್ಪ, ಸೋಮನಾಯ್ಕ, ಪ್ರಕಾಶ್, ಗುರುಸ್ವಾಮಿ, ಪ್ರಶಾಂತ್, ಲೋಕೇಶ್, ಭೀಮನಹಳ್ಳಿ ಸೋಮೇಶ್, ಬಿಡುಗಲ್ ರಾಜು, ರವೀಂದ್ರ, ಶ್ರೀಮುರಳಿ, ಸೋಮಣ್ಣ ಬಸವರಾಜು, ಮಲಾರ ಶಿವರಾಜು, ಕುಮಾರ, ಸೋಮನಾಯ್ಕ, ಸಿದ್ದನಾಯ್ಕ, ಲೋಕೇಶ್, ಗೋಪಾಲಯ್ಯ, ಜವರಯ್ಯ, ಮುಳ್ಳೂರ್ ರವಿ, ಭಾನುಪ್ರಕಾಶ್, ವಿಜಿ, ಸುಬ್ರಮಣ್ಯ, ಗಿರೀಶ್, ಗೋಪಾಲಯ್ಯ, ನಾಗನಾಯಕ, ಮಂಜು, ಕೃಷ್ಣನಾಯ್ಕ, ಗೋವಿಂದ ನಾಯ್ಕ, ಜ್ಯೋತಿ ಕುಮಾರ್, ವೆಂಕಟನಾಯಕ, ಬಿದರಳ್ಳಿ ಪ್ರಕಾಶ್, ಕೃಷ್ಣಕುಮಾರ್, ಗೋವಿದರಾಜ, ಮಹೇಶ್, ಕೃಷ್ಣ, ಪುನೀತ, ಚಂದ್ರು, ಜವರಾಜು ಸೇರಿದಂತೆ ಮತ್ತಿತರರಿದ್ದರು.
ಬಾಕ್ಸ್ :
ಸಮುದಾಯದ ಮುಖಂಡರಿಂದ ಅಸಹಕಾರ: ರಾಜ್ಯ ಬಿಜೆಪಿ ಕರೆ ನೀಡಿರುವ ಧರಣಿಗೆ ತಾಲೂಕಿನಿಂದ ಸಾಮಾನ್ಯರು ಬರುವ ಮಾಹಿತಿಯನ್ನು ಅರಿತ ಜಿಲ್ಲಾ ಮಟ್ಟದ ಸ್ವ- ಸಮುದಾಯದ ಮುಖಂಡರಿಬ್ಬರು ತಾಲೂಕಿನ ಮುಖಂಡರುಗಳಿಗೆ ದೂರವಾಣಿ ಕರೆ ಮಾಡಿ ಧರಣಿಗೆ ಆಗಮಿಸದಂತೆ ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಪಕ್ಷಕ್ಕೆ ದ್ರೋಹ ಬಗೆದಂತೆ ಎಂದು ಸಮುದಾಯದ ಜಿಲ್ಲಾ ಮುಖಂಡರಿಬ್ಬರ ವಿರುದ್ಧ ಅಸಮಾಧಾನ ಹೊರಹಾಕಿದರು.