ಅರಮನೆಯಂಗಳದಲ್ಲಿ ಮಾವುತರ ಜೊತೆಗೂಡಿ ಉಸ್ತುವಾರಿ ಸಚಿವರು ವಾಲಿಬಾಲ್ ಆಟವಾಡಿದ್ದಾರೆ. ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ ಅವರು ನಾಡಹಬ್ಬ ಮೈಸೂರು ದಸರಾ ಆಚರಣೆಗಾಗಿ ಮೈಸೂರು ಅರಮನೆಗೆ ಆಗಮಿಸಿರುವ ಗಜಪಡೆಯ ಮಾವುತರು ಹಾಗೂ ಕಾವಾಡಿಗಳ ಮಕ್ಕಳೊಟ್ಟಿಗೆ ಕೆಲ ಸಮಯ ವಾಲಿಬಾಲ್ ಆಟವಾಡಿ ಎಲ್ಲರ ಗಮನ ಸೆಳೆದರು.
ದಸರಾ ಉಪಸಮಿತಿಗಳ ಸಭೆಗಾಗಿ ಆಗಮಿಸಿದ್ದ ಇವರು, ಸಭೆಯ ನಂತರ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಮಾವುತ ಮತ್ತು ಕಾವಾಡಿಗಳ ಮಕ್ಕಳ ಜೊತೆಗೂಡಿ ಕೆಲಸಮಯ ಅಲ್ಲಿಯೇ ವಾಲಿಬಾಲ್ ಆಟವನ್ನಾಡಿದ್ದಾರೆ.